ಸಚಿವ ಖಾದರ್ರಿಂದ ಸಂಚಾರ ನಿಯಂತ್ರಣ!
ಮಂಗಳೂರು, ಮೇ 29: ಮಳೆಯ ಹಿನ್ನೆಲೆಯಲ್ಲಿ ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಟ್ರಾಫಿಕ್ ಜಾಂ ಉಂಟಾಗಿದ್ದು, ಸಚಿವ ಯು.ಟಿ. ಖಾದರ್ ಸ್ವತಃ ವಾಹನಗಳ ಸಂಚಾರವನ್ನು ನಿಯಂತ್ರಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಸೇತುವೆಯಲ್ಲಿ ವಾಹನಗಳ ಸಂಚಾರಕ್ಕೆ ಉಂಟಾದ ತೊಂದರೆಯನ್ನು ಮನಗಂಡು ಕಾರಿನಿಂದಿಳಿದು ಸ್ವತಃ ಸಂಚಾರ ನಿಯಂತ್ರಿಸಿದರು. ಸಚಿವರ ಕಾರ್ಯಕ್ಕೆ ಕಾರ್ಪೊರೇಟರ್ ಲತೀಫ್ ಕಂದಕ್ ಸಾಥ್ ನೀಡಿದರು.
Next Story