ಪರ್ಕಳದಲ್ಲಿ ಸೂರ್ಯಗ್ರಹಣ ವೀಕ್ಷಣೆ
ಉಡುಪಿ, ಜೂ.21: ಪರ್ಕಳದ ಸ್ವಾಗತ್ ಹೋಟೆಲ್ನ ಬಳಿ ರವಿವಾರ ಸೂರ್ಯಗ್ರಹಣವನ್ನು ಮಣಿಪಾಲದ ಆರ್.ಮನೋಹರ್ ಅವರ ದೂರ ದರ್ಶಕದ ಮೂಲಕ ಹಾಗೂ ಸುಹಾಸ್ ಶೆಣೈ ಸರಳೇಬೆಟ್ಟು ಅವರ ಡಿಜಿಟಲ್ ವಿನ್ಯಾಸದ ಕ್ಯಾಮೆರಾದಿಂದಸಾರ್ವಜನಿಕರು ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಹೋಟೆಲ್ ಮಾಲಕ ಮೋಹನ್ದಾಸ್ ನಾಯಕ್, ಕಾಂಗ್ರೆಸ್ ಮುಖಂಡ ಜಯಶೆಟ್ಟಿ ಬನ್ನಂಜೆ, ಉದ್ಯಮಿ ಎಂ.ಗುರುರಾಜ್ ಶೆಟ್ಟಿ, ಸುಹಾಸ್ ಶೆಟ್ಟಿ, ವಾಲ್ಟರ್ ಡಿಸೋಜ ಕೊಳಲಗಿರಿ ಮೊದಲಾದವರು ಇದ್ದರು.
ಕೊರೋನ ಭೀತಿಯ ಹಿನ್ನೆಲೆಯಲ್ಲಿ ಗ್ರಹಣ ವೀಕ್ಷಕರಿಗೆ ಮಾಸ್ಕ್ ಹಾಗೂ ಸೆನೆಟೈಜರ್ ಬಳಸುವಂತೆ ಸಾಮಾಜಿಕ ಕಾರ್ಯಕರ್ತ ರಾಜೇಶ್ ಪ್ರಭು ಪರ್ಕಳ ವೇಷ ಧರಿಸಿ ಜನಜಾಗೃತಿ ಮೂಡಿಸಿದರು. ಕಾರ್ಯಕ್ರಮವನ್ನು ಗಣೇಶ್ ರಾಜ್ ಸರಳೇಬೆಟ್ಟು ಸಂಘಟಿಸಿದ್ದರು.
Next Story