ದೇರಳಕಟ್ಟೆ : ಕೋವಿಡ್19 ಕುರಿತು ಸಂವಾದ ಕಾರ್ಯಕ್ರಮ
ತೊಕ್ಕೊಟ್ಟು : ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ( ಡಿವೈಎಫ್ಐ) ದೇರಳಕಟ್ಟೆ ಘಟಕ ಮತ್ತು ಯೇನಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆ ದೇರಳಕಟ್ಟೆ ಇವರ ಸಹಯೋಗದಲ್ಲಿ ಕೋವಿಡ್ 19 ಕುರಿತ ಜಾಗೃತಿ ಮತ್ತು ಟೆಲಿಮೆಡಿಷನ್ ಕುರಿತ ಸಂವಾದ ಕಾರ್ಯಕ್ರಮ ದೇರಳಕಟ್ಟೆ ಜಲಾಲ್ ಭಾಗ್ ನಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಡಿವೈಎಫ್ಐ ದೇರಳಕಟ್ಟೆ ಘಟಕದ ಅಧ್ಯಕ್ಷ ನವಾಝ್ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಡಾ. ಮಹಮ್ಮದ್ ಗುತ್ತಿಗಾರು, ವಿಜಯಾನಂದ ಶೆಟ್ಟಿ ಕೋವಿಡ್ ಕುರಿತಂತೆ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಡಿವೈಎಫ್ಐ ಉಳ್ಳಾಲ ವಲಯ ಸಮಿತಿ ಅಧ್ಯಕ್ಷ ಅಶ್ರಫ್ ಕೆಸಿರೋಡ್, ರಾಣಿ ಅಬ್ಬಕ್ಕ ಬಸ್ ನೌಕರರ ಸಂಘದ ಅಧ್ಯಕ್ಷ ಅಲ್ತಾಫ್ ಮುಡಿಪು, ಕಾರ್ಮಿಕ ಮುಂದಾಳು ಇಬ್ರಾಹಿಂ ಮದಕ, ಡಿವೈಎಫ್ಐ ಕಾರ್ಯದರ್ಶಿ ದಿವಾಕರ್, ಹಿರಿಯ ಚಾಲಕ ಮುನೀರ್ ಪಾಲ್ಗೊಂಡರು.
ಸಭೆಯಲ್ಲಿ ಬಸ್ಸು ನೌಕರರ ಸಂಘದ ಕಾರ್ಯದರ್ಶಿ ಜಗದೀಶ್, ಕೋಶಾಧಿಕಾರಿ ಅಶ್ರಫ್, ಯೇನಪೊಯ ಸಂಸ್ಥೆಯ ಶಾಫಿ, ಶಿವಪ್ರಸಾದ್, ಡಿವೈಎಫ್ಐ ಮುಖಂಡರಾದ ಕಿಶೋರ್, ಸಫ್ವಾನ್, ಬಾಝಿಕ್ ಉಪಸ್ಥಿತರಿದ್ದರು. ನಝೀರ್ ಸ್ವಾಗತಿಸಿ, ವಂದಿಸಿದರು.