ರಸ್ತೆಯ ಗುಂಡಿ ಮುಚ್ಚಿದ ಜ್ಯುವೆಲ್ಲರಿ ಮಾಲಕ
ಉಡುಪಿ, ಜೂ.28: ರಸ್ತೆಯಲ್ಲಿನ ಬೃಹತ್ ಗುಂಡಿಯನ್ನು ಉಡುಪಿಯ ಜುವೆಲ್ಲರಿ ಮಾಲಕರೊಬ್ಬರು ಸ್ವತಃ ತಾವೇ ಕಾಂಕ್ರೀಟ್ ಹಾಕಿ ಮುಚ್ಚಿ ಸಂಚಾರಕ್ಕೆ ಯೋಗ್ಯವನ್ನಾಗಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕುಕ್ಕಿಕಟ್ಟೆ ರೈಲ್ವೆ ಸೇತುವೆಯಲ್ಲಿ ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಇತ್ತೀಚೆಗೆ ಡಾಮರೀಕರಣಗೊಂಡ ರಸ್ತೆಯಲ್ಲಿ ಬೃಹತ್ ಹೊಂಡಗಳು ಕಂಡುಬಂದಿದ್ದವು. ಇದರಿಂದ ವಾಹನ ಸಂಚಾರಕ್ಕೆ ಬಹಳ ತೊಂದರೆ ಉಂಟಾಗುತ್ತಿತ್ತು. ಅಲ್ಲದೆ ಪಾದಚಾರಿಗಳಿಗೂ ಕೆಸರಿನ ಅಭಿಷೇಕ ವಾಗುತಿತ್ತು.
ಅದೇ ರಸ್ತೆಯಲ್ಲಿ ಸಂಚರಿಸುವ ಉಡುಪಿಯ ನ್ಯೂ ಮಂಗಳ ಜುವೆಲ್ಲರ್ನ ಮಾಲಕ ಅಲೆವೂರು ಯೋಗೀಶ್ ಆಚಾರ್ಯ, ಇದನ್ನು ಗಮಿಸಿ, ಬೃಹತ್ ಗುಂಡಿಯನ್ನು ಕಾಂಕ್ರಿಟ್ ಹಾಕಿ ಮುಚ್ಚಿದ್ದಾರೆ.
Next Story