ರವಿವಾರ ಲಾಕ್ಡೌನ್: ಕಾಂಗ್ರೆಸ್ ಕಾರ್ಯಕರ್ತರ ಪಡೆ ರಚನೆ
ಉಡುಪಿ, ಜು.4: ರವಿವಾರದ ಸಂಪೂರ್ಣ ಲಾಕ್ಡೌನ್ನ್ನು ದುರುಪಯೋಗಪಡಿಸಿಕೊಂಡು ಅಕ್ರಮ ಮರಳು ದಂಧೆ ಹಾಗೂ ಅರಣ್ಯ ಸಂಪತ್ತು ಲೂಟಿ ಬಗ್ಗೆ ಹದ್ದಿನ ಕಣ್ಣಿಡಲು ಕಾಂಗ್ರೆಸ್ ಕಾರ್ಯರ್ತರ ಪಡೆಯನ್ನು ರಚಿಸಲಾಗಿದೆ.
ಜುಲೈ 4ರ ಶನಿವಾರ ರಾತ್ರಿ 8 ಗಂಟೆಯಿಂದ ಜುಲೈ 6 ಸೋಮವಾರ ಬೆಳಗ್ಗೆ 5 ಗಂಟೆ ತನಕ ದಂಧೆಕೋರರ ಮೇಲೆ ಹದ್ದಿನ ಕಣ್ಣು ಇಡುವಂತೆ ಪರ್ಕಳ ಕಾಂಗ್ರೆಸ್ ಮುಖಂಡ ಮೋಹನ್ದಾಸ್ ನಾಯಕ್, ಗಣೇಶ್ ರಾಜ್ ಸರಳೇಬೆಟ್ಟು, ಜಯಶೆಟ್ಟಿ ಬನ್ನಂಜೆ, ಸುನಿಲ್ ಕುಮಾರ್ ಮಾರುತಿ ನಗರ, ಎನ್.ಸತೀಶ್ ಶೆಟ್ಟಿ ಕೆಳಪರ್ಕಳ ಜಿಲ್ಲೆಯ ಪಕ್ಷದ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.
ಈ ಹಿಂದೆ ಲಾಕ್ಡೌನ್ ಸಂದರ್ಭದಲ್ಲಿ ಸರಕಾರಿ ಯಂತ್ರವನ್ನು ದುರುಪಯೋಗಪಡಿಸಿದ ಆಡಳಿತ ಪಕ್ಷ ಮರಳು ದಂಧೆ ನಡೆಸಿರುವುದು ಸಾಬೀತಾಗಿದೆ. ಅದೇ ರೀತಿ ಅರಣ್ಯ ಸಂಪತ್ತು ಲೂಟಿ ಮಾಡಿರುವುದು ಹಾಗೂ ದಕ್ಷ ಅರಣ್ಯ ಅಧಿಕಾರಿಗಳನ್ನು ಎತ್ತಂಗಡಿ ಮಾಡಿರುವುದು ಜಗಜ್ಜಾಹೀರಾಗಿದೆ ಎಂದು ಅವರು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
Next Story