ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಕನ್ಯಾಡಿಯ ಶ್ರೀರಾಮ ರೆಸಿಡೆನ್ಸಿ ಕಟ್ಟಡದ ಹಿಂದುಗಡೆ ಭಾರೀ ಮಳೆಯಿಂದಾಗಿ ಗುಡ್ಡ ಜರಿದ ಘಟನೆ ಸಂಭವಿಸಿದೆ.
ಕುಸಿದ ಮಣ್ಣು ಹಾಗೂ ನೀರು ಲಾಡ್ಜ್ ನ ಕೊಠಡಿಗಳಿಗೆ ನುಗ್ಗಿದ್ದು, ಅಪಾರ ನಷ್ಟ ಸಂಭವಿಸಿದೆ, ಕಟ್ಟಡಕ್ಕೂ ಹಾನಿಯಾಗಿದೆ ಎಂದು ಕಟ್ಟಡ ಮಾಲಕ ಉಮೇಶ್ ಪ್ರಭು ತಿಳಿಸಿದ್ದಾರೆ