ಕಾರ್ಕಳ ಎಪಿಎಂಸಿ ಬಿಜೆಪಿಯ ಹಿಡಿತದಲ್ಲಿ
ಮೋಹನ್ದಾಸ್ ಶೆಟ್ಟಿ ಹಾಗೂ ರತ್ನಾಕರ ಅಮೀನ್
ಕಾರ್ಕಳ: ಕಾರ್ಕಳ ಎಪಿಎಂಸಿಗೆ ನಡೆದ 3ನೇ ಅವಧಿಯ ಚುನಾವಣೆಯಲ್ಲಿ ಬಿಜೆಪಿಯ ಬೆಂಬಲಿತ ಸದಸ್ಯರು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ.
ಸೋಮವಾರದಂದು ಚುನಾವಣೆ ಪ್ರಕ್ರಿಯೆ ನಡೆದಿದೆ. ಬಿಜೆಪಿ ಬೆಂಬಲಿತ 9 ಹಾಗೂ ಕಾಂಗ್ರೆಸ್ ಬೆಂಬಲಿತ 4 ಸದಸ್ಯರು ಒಳಗೊಂಡಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಮೋಹನದಾಸ್ ಶೆಟ್ಟಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರತ್ನಾಕರ ಅಮೀನ್ ನಾಮಪತ್ರ ಸಲ್ಲಿಸಿದ್ದು, ಅಂತಿಮ ಹಂತವಾಗಿ ಅವರಿಬ್ಬರು ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ.
ಮೋಹನ್ದಾಸ್ ಶೆಟ್ಟಿ ಅವರು ಬ್ಯಾಂಕ್ವೊಂದರ ನಿವೃತ್ತಿ ಅಧಿಕಾರಿಯಾಗಿದ್ದಾರೆ. ರತ್ನಾಕರ ಅಮೀನ್ ಅವರು ನಿಕಟಪೂರ್ವದಲ್ಲಿಯೂ ಉಪಾಧ್ಯಕ್ಷರಾಗಿದ್ದರು. ಜುಲಾಯಿ 10ರಂದು ಅಧಿಕಾರ ಹಸ್ತಾಂತರ ನಡೆಯಲಿದೆ.
ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಪುರಂದರ ಹೆಗ್ಡೆ ಚುನಾವಣಾ ಪ್ರಕ್ರಿಯೆ ನಡೆಸಿದ್ದಾರೆ.
ನಿಕಟಪೂರ್ವ ಎಪಿಎಂಸಿ ಅಧ್ಯಕ್ಷ ಜಯವರ್ಮ ಕಾರ್ಯದರ್ಶಿ ಜಿ.ಟಿ.ಕಾಕನೂರು, ಸಹಾಯಕ ಕಾರ್ಯದರ್ಶಿ ಶಿವಾನಂದ, ಎಪಿಎಂಸಿ ನಿರ್ದೇಶಕರು ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಪುಷ್ಪಗುಚ್ಚ ಹಾಗೂ ಹಾರ ಹಾಕಿ ಅಭಿನಂದಿಸಿದ್ದಾರೆ.