ಗುರುವಿದ್ಯಾರ್ಥಿಗಳ ಸಾವಿಗೆ ಯಾರು ಹೊಣೆ?: ಎನ್ಡಬ್ಲುಎಫ್
ಗುರುಪುರ ಗುಡ್ಡ ಕುಸಿತ ಪ್ರಕರಣ
ಮಂಗಳೂರು, ಜು.6: ಗುರುಪುರ ಕೈಕಂಬದ ಬಂಗ್ಲೆಗುಡ್ಡೆಯಲ್ಲಿ ಮಣ್ಣು ಕುಸಿತಕ್ಕೆ ಇಬ್ಬರು ವಿದ್ಯಾರ್ಥಿಗಳು ಬಲಿಯಾಗಿದ್ದು 7 ಕುಟುಂಬಗಳು ಮನೆ ಮಠ ಕಳೆದುಕೊಂಡ ಘಟನೆಗೆ ಯಾರು ಹೊಣೆ ಎಂದು ನ್ಯಾಷನಲ್ ವುಮೆನ್ಸ್ ಫ್ರಂಟ್ ದ.ಕ. ಜಿಲ್ಲಾ ಸಮಿತಿಯು ಪ್ರಶ್ನಿಸಿದೆ.
ಹಲವು ದಿನಗಳಿಂದ ತಡೆಗೋಡೆ ನಿರ್ಮಾಣಕ್ಕಾಗಿ ಸ್ಥಳೀಯ ಗ್ರಾಪಂಗೆ ಹಾಗೂ ತಹಸೀಲ್ದಾರ್ಗೆ ಮನವಿಗಳನ್ನು ಸಲ್ಲಿಸಿದ್ದರೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ತೀವ್ರ ಗಾಳಿಮಳೆಯ ಸಂದರ್ಭ ಜನರ ಸುರಕ್ಷತೆಗಾಗಿ ಮನೆ ತೆರವುಗೊಳಿಸಲು ಸೂಚನೆ ನೀಡದಿರುವುದು ಕೂಡ ಅಧಿಕಾರಿಗಳ ಬೇಜವಾಬ್ದಾರಿತನವಾಗಿದೆ. ಸರಕಾರವು ಸಂತ್ರಸ್ತರ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಒದಗಿಸಬೇಕು, ಮುಂದೆ ಇಂತಹ ಅನಾಹುತಗಳಾಗದಂತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎನ್ಡಬ್ಲುಎಫ್ ಆಗ್ರಹಿಸಿದೆ.
Next Story