ಬ್ರಹ್ಮಾವರ: ನದಿಗೆ ಹಾರಿ ಯುವಕ ಆತ್ಮಹತ್ಯೆ
ಬ್ರಹ್ಮಾವರ, ಜು.9: ಕಳೆದ ಜು.7ರಂದು ನಾಪತ್ತೆಯಾಗಿ ಈ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾದ ಅಂಬರೀಶ್ ಎಂಬ ಯುವಕನ ಮೃತದೇಹವು ಇಂದು ಬೆಳಗ್ಗೆ ಉಪ್ಪೂರು ಅಮ್ಮುಂಜೆಯ ಬಳಿ ಸ್ವರ್ಣ ನದಿಯಲ್ಲಿ ಪತ್ತೆಯಾಗಿದೆ. ಬೆಳ್ಳಂಪಳ್ಳಿ ಸೇತುವೆಯ ಮೇಲೆ ಅಂಬರೀಶ್ ಅವರ ಡಿಸ್ಕವರ್ ಬೈಕ್, ಹೆಲ್ಮೆಟ್ ಹಾಗೂ ಚಪ್ಪಲಿ ಸಿಕ್ಕಿದೆ. ಅಲ್ಲಿ ಹುಡುಕಾಡಿದಾಗ ಹೊಳೆಯಲ್ಲಿ ಗಂಡಸಿನ ಮೃತದೇಹ ಪತ್ತೆಯಾಗಿದ್ದು, ಬಳಿಕ ಅದನ್ನು ಅಂಬರೀಶ್ ಅವರದ್ದೆಂದು ಗುರುತಿಸಲಾಯಿತು.
ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story