ವಿಷಕಾರಿ ಹಾವು ಕಡಿತ: ವೃದ್ಧ ಮೃತ್ಯು
ಬ್ರಹ್ಮಾವರ, ಜು.16: ವಿಷಕಾರಿ ಹಾವು ಕಡಿತಕ್ಕೊಳಗಾದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕುದಿ ಗ್ರಾಮದ ಕೊಕ್ಕರ್ಣೆ ಎಂಬಲ್ಲಿ ಜು.15ರಂದು ರಾತ್ರಿ ವೇಳೆ ನಡೆದಿದೆ.
ಮೃತರನ್ನು ಯಶೋಧರ ಶೆಟ್ಟಿ(62) ಎಂದು ಗುರುತಿಸಲಾಗಿದೆ. ಇವರು ಮನೆಯ ವಾಶಿಂಗ್ ಮೆಶಿನ್ನ ನೀರು ಬ್ಲಾಕ್ ಆಗಿರುವುದನ್ನು ಸರಿ ಮಾಡಲು ಮನೆಯ ಹಿಂಬದಿಗೆ ಹೋದಾಗ ಅಲ್ಲಿ ವಿಷದ ಹಾವು ಕಾಲಿನ ಹೆಬ್ಬೆರಳಿಗೆ ಕಚ್ಚಿ ತ್ತೆನ್ನಲಾಗಿದೆ. ಇದರಿಂದ ತೀವ್ರ ಅಸ್ವಸ್ಥಗೊಂಡ ಇವರು, ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬರುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story