ಮೂಡುಬಿದಿರೆ: 'ಕಲ್ಲಮುಂಡ್ಕೂರು ಸೇವಾ ಸಂಸ್ಥೆ' ವತಿಯಿಂದ ಶ್ರಮದಾನ
ಮೂಡುಬಿದಿರೆ: ಲಾಕ್ಡೌನ್ ಸಂದರ್ಭವನ್ನು ಸದುಪಯೋಗಪಡಿಸಿಕೊಂಡಿರುವ ಕಲ್ಲಮುಂಡ್ಕೂರು ಸೇವಾ ಸಂಸ್ಥೆಯ ಯುವಕರು ಪಾಲಡ್ಕ ಗ್ರಾ.ಪಂ.ವ್ಯಾಪ್ತಿಯ ನೆಲ್ಲಕ್ಕೆ ಕಿನ್ನಿಪದವಿನಲ್ಲಿರುವ ವಿಧವೆ ಶಾಂತಾ ನಾಯ್ಕ್ ಅವರಿಗೆ ಸ್ನಾನಗೃಹ ಮತ್ತು ಶೌಚಾಲಯವನ್ನು ನಿರ್ಮಿಸಲು ರವಿವಾರ ಶ್ರಮದಾನ ಮಾಡಿದರು.
ರೂಪಾ ಬಲ್ಲಾಳ್ ಅವರ ಸ್ನೇಹಿತರ ತಂಡವಾಗಿರುವ "ಕಲ್ಲಮುಂಡ್ಕೂರು ಸೇವಾ ಸಂಸ್ಥೆ" ತಂಡದ 23 ಸದಸ್ಯರು ರವಿವಾರ ಪಾಲ್ಗೊಂಡು ಶೌಚಾಲಯ ಗುಂಡಿ ಹಾಗೂ ಸ್ನಾಹಗೃಹವನ್ನು ನಿರ್ಮಿಸಲು ಶ್ರಮದಾನವನ್ನು ಮಾಡುವ ಮೂಲಕ ಬಡಕುಟುಂಬಕ್ಕೆ ನೆರವಾದರು. ಉದ್ಯಮಿ, ಮೂಡುಬಿದಿರೆ ರೋಟರಿ ಕ್ಲಬ್ ಆಪ್ ಮಿಡ್ಟೌನ್ನ ಮಾಜಿ ಅಧ್ಯಕ್ಷ ರೋ/ಅರುಣ್ ಪ್ರಕಾಶ್ ಶೆಟ್ಟಿ ಅವರು ಸ್ನಾನಗೃಹ ಮತ್ತು ಶೌಚಾಲಯ ನಿರ್ಮಾಣಕ್ಕೆ ಕೆಂಪುಕಲ್ಲನ್ನು ದಾನವಾಗಿ ನೀಡಿದರು.
ಮೂಡುಬಿದಿರೆ ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯ ಮುಖ್ಯಸ್ಥ ಪ್ರಕಾಶ್ ಶೆಟ್ಟಿಗಾರ್, "ಯುವ ಮಿಲನ್" ತಂಡದ ರೂಪಾ ಬಲ್ಲಾಳ್ ಹಾಗೂ ಸಮಾಜ ಸೇವಕ, ಕೇಮಾರಿನ ಸುಕೇಶ್ ಶೆಟ್ಟಿ, ಕರುಣಾಕರ ಸುವರ್ಣ ಈ ಸಂದರ್ಭದಲ್ಲಿದ್ದರು.
Next Story