ಕುಂದಾಪುರ: ಜುಗಾರಿ ಆಡುತ್ತಿದ್ದ ಏಳು ಮಂದಿಯ ಬಂಧನ
ಕುಂದಾಪುರ, ಜು.26: ಬೀಜಾಡಿ ಗ್ರಾಮದ ಮೂಡುಗೋಪಾಡಿಯ ಭಾಗವತರ ಹಾಡಿಯ ಬಳಿ ಜು.26ರಂದು ಬೆಳಗ್ಗೆ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಏಳು ಮಂದಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಕೋಟೇಶ್ವರ ಮಾರ್ಕೋಡಿನ ಗಣೇಶ ದೇವಾಡಿಗ(38), ನವೀನ ಗೊಲ್ಲ (31), ನಾಗರಾಜ ಗಾಣಿಗ(38), ಕುಂಭಾಶಿಯ ರವಿ(35), ಬೀಜಾಡಿಯ ಯಾಸೀನ್(34), ಇಬ್ರಾಹಿಂ(42), ಚಿತ್ರಪಾಡಿಯ ರಾಜೇಂದ್ರ ಆಚಾರಿ (31) ಬಂಧಿತ ಆರೋಪಿಗಳು. ಇವರಿಂದ 2070ರೂ. ನಗದು, ಒಂದು ಕಾರು ಮತ್ತು 4 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story