ಆ.7ರಂದು ಜಿ.ರಾಜಶೇಖರ್ಗೆ ಕಿರಂ ಪುರಸ್ಕಾರ ಪ್ರದಾನ
ಉಡುಪಿ, ಆ.6: ಬೆಂಗಳೂರು ಜನಸಂಸ್ಕೃತಿ ಪ್ರತಿಷ್ಠಾನ ಮತ್ತು ಬೆಂಗಳೂರು ಆರ್ಟ್ ಫೌಂಡೇಶನ್, ಉಡುಪಿಯ ರಥಬೀದಿ ಗೆಳೆಯರು ಸಹಯೋಗದಲ್ಲಿ ಹಿರಿಯ ಚಿಂತಕ ಜಿ.ರಾಜಶೇಖರ್ ಅವರಿಗೆ ವಿಮರ್ಶಕ, ಚಿಂತಕ ಕಿರಂ ನಾಗರಾಜ್ ನೆನಪಲ್ಲಿ ‘ಕಿರಂ ಪುರಸ್ಕಾರ’ವನ್ನು ಆ.7ರಂದು ಸಂಜೆ ಗಂಟೆ 4:15ಕ್ಕೆ ಉಡುಪಿ ಕೊಳಂಬೆಯ ಅವರ ನಿವಾಸದಲ್ಲಿ ಪ್ರದಾನ ಮಾಡಲಿವೆ.
ಈ ಸಂದರ್ಭದಲ್ಲಿ ಚಿಂತಕ ಪ್ರೊ.ಕೆ.ಫಣಿರಾಜ್, ರಥಬೀದಿ ಗೆಳೆಯರು ಅಧ್ಯಕ್ಷ ಪ್ರೊ.ಮುರುಳಿಧರ ಉಪಾಧ್ಯಾ ಹಿರಿಯಡ್ಕ, ಕಾರ್ಯದರ್ಶಿ ಪ್ರೊ. ಸುಬ್ರಹ್ಮಣ್ಯ ಜೋಶಿ ಭಾಗವಹಿಸಲಿರುವರು.
ಕಿರಂ ಅವರ ನೆನಪಿನಲ್ಲಿ ಕಿರಂ ಬಳಗ ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರ ಸಾಧನೆಯನ್ನು ಗುರು ತಿಸಿ ಈ ಪುರಸ್ಕಾರವನ್ನು ನೀಡಿ ಗೌರವಿಸುತ್ತಿದೆ. ಈ ಪ್ರಯುಕ್ತ ಫೇಸ್ಬುಕ್ ಲೈವ್ನಲ್ಲಿ 24 ಗಂಟೆಗಳ ಕಾಲ ಸಾಹಿತ್ಯ ಕಾರ್ಯಕ್ರಮವನ್ನು ‘ಕಾಡುವ ಕಿರಂ’ ಹೆಸರಲ್ಲಿ ಕಿರಂ ಬಳಗ ಆಯೋಜಿಸಿದೆ ಎಂದು ರಥಬೀದಿ ಗೆಳೆಯರು ಪ್ರಕಟಣೆ ತಿಳಿಸಿದೆ.
Next Story