ಬಗರ್ ಹುಕುಂ ಅಕ್ರಮ ಸಕ್ರಮದ ಅವಧಿ ವಿಸ್ತರಣೆ: ಆರ್.ಅಶೋಕ್
ಉಡುಪಿ, ಆ.7: ಕೃಷಿ ಸಾಗುವಳಿ ಭೂಮಿ ಬಗರ್ ಹುಕುಂ ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸುವ ಅವಧಿಯನ್ನು ಎರಡು ವರ್ಷಗಳ ಕಾಲ ವಿಸ್ತರಿಸ ಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯ ಮಂತ್ರಿ ಆರೋಗ್ಯವಾಗಿದ್ದಾರೆ. ಆದಷ್ಟು ಬೇಗ ಗುಣಮುಖರಾಗಿ ಬಿಡುಗಡೆ ಹೊಂದಲಿದ್ದಾರೆ. ಪ್ರವಾಹ ಹಾಗೂ ಕೊರೋನ ಸಂದರ್ಭದಲ್ಲಿ ಆಸ್ರತ್ರೆಯಲ್ಲಿದ್ದು ಕೊಂಡೆ ಮಂತ್ರಿಗಳು ಹಾಗೂ ಜಿಲ್ಲಾಧಿಕಾರಿಗಳ ಸಂಪರ್ಕ ದಲ್ಲಿದ್ದಾರೆ. ಅಲ್ಲಿಂದಲೇ ಸರಕಾರ ಎಲ್ಲ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದರು.
ಜಿಲ್ಲೆಗೆ ಭೇಟಿ ನೀಡದ ಜಿಲ್ಲಾ ಉಸ್ತುವಾರಿ ಸಚಿವರ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿ ಸಿದ ಅವರು, ಬೊಮ್ಮಾಯಿ ರಾಜ್ಯಕ್ಕೆ ಗೃಹ ಸಚಿವರೂ ಹಾಗೂ ಎರಡು ಜಿಲ್ಲೆಗಳ ಉಸ್ತುವಾರಿ ಕೂಡ ಆಗಿದ್ದಾರೆ. ಇಂದು ನನ್ನೊಂದಿಗೆ ಜಿಲ್ಲೆಗೆ ಭೇಟಿ ನೀಡುವ ಕಾರ್ಯಕ್ರಮವನ್ನು ನಿಗದಿ ಪಡಿಸಿದ್ದರು. ಆದರೆ ಜಿಎಸ್ಟಿ ಸಭೆ ಇದ್ದ ಕಾರಣ ಅವರಿಗೆ ಬರಲು ಸಾಧ್ಯವಾಗಲಿಲ್ಲ. ಮುಂದಿನ ಎರಡು ದಿನಗಳಲ್ಲಿ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಈಗಾಗಲೇ ಅವರು ಜಿಲ್ಲಾಧಿಕಾರಿ ಗಳೊಂದಿಗೆ ನಿರಂತರ ಸಂಪಕದರ್ಲ್ಲಿದ್ದಾರೆ ಎಂದು ತಿಳಿಸಿದರು.