ಹೆಬ್ರಿಯಲ್ಲಿ ಕಾಂಗ್ರೆಸ್ ಆರೋಗ್ಯ ಅಭಯಹಸ್ತ ಕಾರ್ಯಕ್ರಮಕ್ಕೆ ಚಾಲನೆ
ಹೆಬ್ರಿ, ಆ.30: ಕೊರೋನ ನಿರ್ಮೂಲನೆಗಾಗಿ ಕೆಪಿಸಿಸಿ ರೂಪಿಸಿರುವ ಕಾಂಗ್ರೆಸ್ ಆರೋಗ್ಯ ಅಭಯಹಸ್ತ ವಿನೂತನ ಕಾರ್ಯಕ್ರಮಕ್ಕೆ ಹೆಬ್ರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ರವಿವಾರ ಹೆಬ್ರಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡ ಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಕಾಂಗ್ರೆಸ್ ಶಾಶ್ವತವಾಗಿ ಜನರ ನಡುವೆ ಜನರಿಗಾಗಿಯೇ ಇರುವ ಪಕ್ಷ. ಕೊರೊನಾ ಮಹಾಮಾರಿಯ ಸಂಕಷ್ಟದ ಕಾಲದಲ್ಲಿಯೂ ಕಾಂಗ್ರೆಸ್ ಜನರ ಆರೋಗ್ಯದ ಸೇವೆ ಗಾಗಿ ತನ್ನ ತಂಡವನ್ನು ಕಟ್ಟಿಕೊಂಡು ಶ್ರಮಿಸುತ್ತಿದೆ ಎಂದು ತಿಳಿಸಿದರು.
ಹೆಬ್ರಿ ಕಾಂಗ್ರೆಸ್ ವತಿಯಿಂದ ಒಟ್ಟು 28 ಯುವಕ ಯುವತಿಯರು ಕಾಂಗ್ರೆಸ್ ಆರೋಗ್ಯ ಅಭಯಹಸ್ತ ಸೇವಾ ಕಾರ್ಯದಲ್ಲಿ ವಾರಿಯರ್ಸ್ಗಳಾಗಿ ಸೇವೆ ಸಲ್ಲಿಸಲಿದ್ದು, ಇದರಲ್ಲಿ ಮುದ್ರಾಡಿ ಡಾ.ಪ್ರದೀಪ್ ಕುಮಾರ್ ಶೆಟ್ಟಿ, ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ಡಾ.ಯಶಶ್ರೀ, ಕಾಂಗ್ರೆಸ್ ನಾಯಕಿ ಡಾ. ಸುನೀತಾ ಶೆಟ್ಟಿ ವ್ಯೆದ್ಯರಾಗಿ ವಿಶೇಷ ಸೇವೆ ನೀಡಲಿದ್ದಾರೆ.
ಅಧ್ಯಕ್ಷತೆಯನ್ನು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ವಹಿಸಿದ್ದರು. ಡಾ.ಸುನೀತಾ ಡಿ.ಶೆಟ್ಟಿ ಕಾಂಗ್ರೆಸ್ ಆರೋಗ್ಯ ಅಭಯ ಹಸ್ತ ಕಾರ್ಯಕ್ರಮದ ಸಮಗ್ರ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ವಾರಿಯರ್ಸ್ಗಳಾದ ವೈದ್ಯರು, ಅಶೋಕ್ ಕುಮಾರ್ ಕೊಡವೂರು ಮತ್ತು ಹೆಬ್ರಿ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಚಂದ್ರಹಾಸ್ ಅವರನ್ನು ಸನ್ಮಾನಿಸಲಾಯಿತು.
ಕೆಪಿಸಿಸಿಯ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ಉಮರ್ ಫಾರೂಕ್ ಪರಂಗಿಪೇಟೆ, ಕಾಂಗ್ರೆಸ್ ಆರೋಗ್ಯ ಅಭಯಹಸ್ತ ಕಾರ್ಯಕ್ರಮದ ಉಸ್ತುವಾರಿ ರಮೇಶ್ ಎನ್.ಶೆಟ್ಟಿ, ಬಾಲಕೃಷ್ಣ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಯುವ ಮುಖಂಡ ಎಚ್.ಪ್ರದೀಪ್ ಭಂಡಾರಿ, ಕಾರ್ಕಳದ ಉದಯ ಶೆಟ್ಟಿ ಕುಕ್ಕುಂದೂರು, ಮಧುರಾಜ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತ ಲಕ್ಷ್ಮಣ ಆಚಾರ್ಯ ಮೊದಲಾ ದವರು ಉಪಸ್ಥಿತರಿದ್ದರು. ಅಶ್ವಿನಿ ಶೆಟ್ಟಿ ಸ್ವಾಗತಿಸಿ ವಂದಿಸಿದರು. ಚೈತ್ರ ಕಬ್ಬಿನಾಲೆ ಕಾರ್ಯಕ್ರಮ ನಿರೂಪಿಸಿದರು.