ಗಾಂಜಾ ಸೇವನೆ: ಮತ್ತೆ ಐವರು ವಶಕ್ಕೆ
ಉಡುಪಿ, ಸೆ.14: ಗಾಂಜಾ ಸೇವನೆಗೆ ಸಂಬಂಧಿಸಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು ಐದು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಬಗ್ಗೆ ವರದಿಯಾಗಿದೆ.
ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಹೇರೂರು ಗ್ರಾಮದ ಕೊಳಂಬೆ ಬಳಿ ಸೆ.13ರಂದು ಬೆಳಗ್ಗೆ ಹೇರೂರು ರಾಜೀವ ನಗರದ ರಕ್ಷಿತ್(25), ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆ.11ರಂದು ಹೆಮ್ಮಾಡಿ ಗ್ರಾಮದ ಹೆಮ್ಮಾಡಿ ಜಂಕ್ಷನ್ ಬಳಿ ಕಟ್ಬೇಲ್ತೂರು ಗ್ರಾಮದ ಪುನೀತ್(21) ಮತ್ತು ತಲ್ಲೂರು ಜಂಕ್ಷನ್ ಎಂಬಲ್ಲಿ ಹೆಮ್ಮಾಡಿ ಗ್ರಾಮದ ಕೊಲ್ಲೂರು ರಸ್ತೆಯ ಪ್ರಮೋದ್(22), ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಕನಿಡಿಯೂರು ಗ್ರಾಮದ ಬೆಳ್ಕಳೆ ದೇವಸ್ಥಾನದ ಬಳಿ ಸೆ.12ರಂದು ಸ್ಥಳೀಯ ನಿವಾಸಿಗಳಾದ ಅರುಣ್(22) ಹಾಗೂ ಅಭಿಲಾಷ್(21) ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story