ತೆಂಗಿನ ಮರದಿಂದ ಕೆರೆಗೆ ಬಿದ್ದು ಮೃತ್ಯು
ಹೆಬ್ರಿ, ಸೆ.15: ತೆಂಗಿನ ಮರದಿಂದ ಕಾಯಿಗಳನ್ನು ಕೊಯ್ದು ಕೆಳಗೆ ಇಳಿಯುತ್ತಿದ್ದ ಕೂಲಿ ಕಾರ್ಮಿಕರೊಬ್ಬರು ಅಕಸ್ಮಿಕವಾಗಿ ಕಾಲು ಜಾರಿ ಕೆಳಗಿದ್ದ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಸೆ.14ರಂದು ಮಧ್ಯಾಹ್ನ ವೇಳೆ ಚಾರ ಗ್ರಾನದ ಮಹಿಷ ಮರ್ದಿನಿ ದೇವಸ್ಥಾನದ ಬಳಿ ನಡೆದಿದೆ.
ಮೃತರನ್ನು ಭಾಸ್ಕರ ಕುಲಾಲ್(47) ಎಂದು ಗುರುತಿಸಲಾಗಿದೆ. ಇವರು ಸತೀಶ ಹೆಬ್ಬಾರ್ ಎಂಬವರ ತೋಟದಲ್ಲಿ ತೆಂಗಿನ ಮರಕ್ಕೆ ಹತ್ತಿ, ಕಾಯಿಯನ್ನು ಕೊಯ್ದು, ನಂತರ ಕೆಳಗೆ ಇಳಿಯುವಾಗ ಅಲ್ಲಿಯೇ ಬದಿಯಲ್ಲಿದ್ದ ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ದೂರ ಲಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story