ಲೌಕ್ಡೌನ್ನಿಂದಾಗಿ ಬ್ಯಾಂಕ್ ಸಾಲ ತೀರಿಸಲಾಗದೆ ಚಾಲಕ ಆತ್ಮಹತ್ಯೆ
ಮಣಿಪಾಲ, ಸೆ.16: ಲೌಕ್ಡೌನ್ನಿಂದಾಗಿ ಬ್ಯಾಂಕ್ ಸಾಲ ಪಾವತಿಸ ಲಾಗದ ಚಿಂತೆಯಲ್ಲಿ ಕಾರು ಚಾಲಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.15ರಂದು ರಾತ್ರಿ ಲಕ್ಷ್ಮೀಂದ್ರನಗರದ ಸುವಿದಾ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ.
ಮೃತರನ್ನು ಸುವಿದಾ ಅಪಾರ್ಟ್ಮೆಂಟ್ ನಿವಾಸಿ ರಾಘವೇಂದ್ರ ಆಚಾರ್ಯ (40) ಎಂದು ಗುರುತಿಸಲಾಗಿದೆ. ಇವರು ಮನೆ ಹಾಗೂ ಕಾರು ಖರೀದಿಸಲು ಬ್ಯಾಂಕಿನಿಂದ 15ಲಕ್ಷ ರೂ. ಸಾಲ ಪಡೆದುಕೊಂಡಿದ್ದರು. ಲಾಕ್ಡೌನ್ನಿಂದಾಗಿ ದುಡಿಮೆ ಇಲ್ಲದ ಕಾರಣ ಸಾಲ ಮರುಪಾವತಿಸಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ. ಇದೇ ಚಿಂತೆಯಲ್ಲಿ ಇವರು ರಾತ್ರಿ ಅಪಾರ್ಟ್ಮೆಂಟ್ನ ಶೆಡ್ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.
Next Story