ಉಳ್ಳಾಲ: ಆಯುಷ್ಮಾನ್ ಕಾರ್ಡ್ ನೋಂದಣಿ ಅಭಿಯಾನ
ಉಳ್ಳಾಲ : ಕಿನ್ಯ ಜನಸೇವಾ ಕೇಂದ್ರ ಬೆಳರಿಂಗೆ ಕಿನ್ಯ ಇದರ ಆಶ್ರಯದಲ್ಲಿ ಕಿನ್ಯ ಹಾಗೂ ಆಸುಪಾಸಿನ ನಿವಾಸಿ ಗಳಿಗೆ ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಅಭಿಯಾನ ಕಿನ್ಯದಲ್ಲಿ ನಡೆಯಿತು.
ಸಯ್ಯದ್ ತಂಙಳ್ ದುವಾ ಆಶೀರ್ವಚನ ನೀಡಿದರು. ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಈ ಅಭಿಯಾನ ನಡೆಸಲಾಗಿದೆ ಎಂದು ಹಮೀದ್ ಕಿನ್ಯ ಈ ಸಂದರ್ಭದಲ್ಲಿ ತಿಳಿಸಿದರು.
ಕಿನ್ಯ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ, ಬಿಲ್ಲವ ಮುಖಂಡ ನಾರಾಯಣ ಪೂಜಾರಿ, ಭಂಡಾರ ಮನೆಯ ಅರ್ಚಕ ಕಿಶೋರ್, ಬಾಬು, ಕಿನ್ಯ ಗ್ರಾ.ಪಂ. ಮಾಜಿ ಸದಸ್ಯ ಸಿದ್ದೀಕ್ ಕಲ್ಲಾಂಡ, ಹಮೀದ್ ಟಿಂಬರ್, ಎಸ್ ಡಿಎಂಸಿ ಅಧ್ಯಕ್ಷ ಅಹ್ಮದ್ ಬಾವ, ಮಂಜನಾಡಿ ಗ್ರಾ.ಪಂ. ಮಾಜಿ ಸದಸ್ಯ ಅಶ್ರಫ್ ಉಪಸ್ಥಿತರಿದ್ದರು.
Next Story