ನಲಿಕೆ ಸಮುದಾಯದ ಅವಹೇಳನ: ಪೊಲೀಸ್ ಆಯುಕ್ತರಿಗೆ ಮನವಿ
ಮಂಗಳೂರು, ಸೆ.19: ಪರಿಶಿಷ್ಟ ಜಾತಿಗೆ ಸೇರಿದ ನಲಿಕೆ ಸಮುದಾಯದ ಕುರಿತಂತೆ ಸ್ಥಳೀಯ ಚಾನೆಲೊಂದರಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದ ವೇಳೆ ವ್ಯಕ್ತಿಯೊಬ್ಬರಿಂದ ಅವಹೇಳನ ನಡೆದಿದೆ ಎಂದು ಆರೋಪಿಸಿ ದ.ಕ. ಜಿಲ್ಲಾ ಪಾಣರ ಯಾನೆ ನಲಿಕೆಯವರ ಸಮಾಜ ಸೇವಾಸಂಘದ ವತಿಯಿಂದ ಪೊಲೀಸ್ ಆಯುಕ್ತರಿಗೆ ಇಂದು ಮನವಿ ಸಲ್ಲಿಸಲಾಯಿತು.
‘‘ದೈವದ ಕಲ’’ ಎಂಬ ಹೆಸರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಲಿಕೆ ಸಮುದಾಯದ ಅವಹೇಳನವಾಗಿದ್ದು, ಅವಹೇಳನ ಮಾಡಿರುವ ವ್ಯಕ್ತಿಯನ್ನು ಕೂಡಲೇ ಬಂಧಿಸಬೇಕು ಹಾಗೂ ಕಾರ್ಯಕ್ರಮವನ್ನು ನಿಷೇಧಿಸಲು ಆದೇಶಿಸಬೇಕು ಎಂದು ಮನವಿಯ ಮೂಲಕ ಸಂಘಟನೆ ಒತ್ತಾಯಿಸಿದೆ.
Next Story