ಕೃಷ್ಣಾಪುರ: ಪಿಎಫ್ಐ ವತಿಯಿಂದ ಸ್ಕೂಲ್ ಚಲೋ ಅಭಿಯಾನ
ಸುರತ್ಕಲ್, ಜೂ.7: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೃಷ್ಣಾಪುರ ಘಟಕದ ವತಿಯಿಂದ ಸ್ಕೂಲ್ ಚಲೋ ಅಭಿಯಾನದ ಪ್ರಯುಕ್ತ ಅರ್ಹ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮವು ಚೊಕ್ಕಬೆಟ್ಟುವಿನ ಕರಾವಳಿ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆಯಿತು.
ಚೊಕ್ಕಬೆಟ್ಟು ಮೊಯ್ದೀನ್ ಜುಮಾ ಮಸೀದಿಯ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸುಮಾರು 71 ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಶಿಕ್ಷಣ ಸಂಬಂಧಿ ಸಾಮಗ್ರಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕೆ.ಎಸ್.ಎ. ಐ.ಎಫ್.ಎಫ್.ನ ಸದಸ್ಯ ಇಬ್ರಾಹೀಂ ಕೃಷ್ಣಾಪುರ, ರಿಯಾದ್ನ ಚೊಕ್ಕಬೆಟ್ಟು ಹೆಲ್ಪ್ಲೈನ್ನ ಅಧ್ಯಕ್ಷ ಮುಹಮ್ಮದ್ ನಾಸಿರ್, ಎಸ್ಡಿಪಿಐ ಕೃಷ್ಣಾಪುರ ವಲಯಾಧ್ಯಕ್ಷ ಅಝರ್ ಉಪಸ್ಥಿತರಿದ್ದರು. ಸಿಎಫ್ಐ ಸದಸ್ಯ ಅಬ್ದುಲ್ ಜಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.
Next Story