ಜೂ. 8ರಿಂದ ರಮಝಾನ್ ಕಾರ್ಯಕ್ರಮ
ಮಂಗಳೂರು, ಜೂ. 7: ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ ಮತ್ತು ಸಲಫಿ ಕಲ್ಚರಲ್ ಅಸೋಸಿಯೇಶನ್ ಜಂಟಿ ಆಶ್ರಯದಲ್ಲಿ ರಮಝಾನ್ ಪ್ರಯುಕ್ತ ಜೂನ್ 8ರಿಂದ ಜುಲೈ 5ರವರೆಗೆ ನಗರದ ಇಬ್ರಾಹೀಂ ಅಲ್ ಖಲೀಲ್ ಮಸೀದಿಯಲ್ಲಿ ಪ್ರತಿ ದಿನ ರೊಹರ್ ನಮಾಝಿನ ಬಳಿಕ ಪ್ರಮುಖ ವಿದ್ವಾಂಸರಿಂದ ಪ್ರವಚನ ಕಾರ್ಯಕ್ರಮ ನಡೆಯಲಿದೆ.
ಜೂ.8ರಂದು ವೌ.ಅಬ್ದುಲ್ ಶುಕೂರ್ ಸ್ವಲಾಹಿ, ಜೂ. 9ರಂದು ನಿಅಮತುಲ್ಲಾಹ್ ಫಾರೂಖಿ, 11ರಂದು ಮುಹಮ್ಮದ್ ಇಮ್ರಾನ್ ಉಮರಿ, 13ರಂಜು ಚುಯೈಲಿ ಅಬ್ದುಲ್ಲಾಹ್ ಮುಸ್ಲಿಯಾರ್, 14ರಂದು ಮುಹಮ್ಮದ್ ಹಾಮಿದ್ ಸಲಫಿ, 15ರಂದು ಮುಜೀಬುರ್ರಹ್ಮಾನ್ ತಚ್ಚಂಬಾರ, 16ರಂದು ಅಬ್ದುರ್ರಹೀಂ ಸಗ್ರಿ, 18ರಂದು ಸಲೀಂ ಹಮದಾನಿ, 20ರಂದು ಮುಹಮ್ಮದ್ ಸಾಕಿಬ್ ಸಲಫಿ, 21ರಂದು ನಾಸಿರುದ್ದೀನ್ ರಹ್ಮಾನಿ, 22ರಂದು ಅಲಿ ಶಾಕಿರ್ ಮುಂಡೇರಿ, 23ರಂದು ಅಬ್ದುಲ್ ಗಫೂರ್ ಜಾಮಈ, 25ರಂದು ನಾಸಿರ್ ಸುಲ್ಲಮಿ, 27ರಂದು ಅಬ್ದುಲ್ಲಾಹ್ ಫಾರೂಖಿ, 28ರಂದು ಅಬ್ದುಲ್ ರಝಾಕ್ ಬಾಖವಿ, 29ರಂದು ಅಬ್ದುಲ್ ಅಝೀಝ್ ಉಮರಿ, 30ರಂದು ಉಮರ್ ಸ್ವಲಾಹಿ ಪ್ರವಚನ ನೀಡಲಿದ್ದಾರೆ.
ಜು.2ರಂದು ಅಲಿ ಉಮರ್, 4ರಂದು ಬಾದುಶಾ ಬಾಖವಿ ಮತ್ತು 5ರಂದು ಶಾಹಜಹಾನ್ ಫೈಝಿ ಮುಂತಾದ ವಿದ್ವಾಂಸರು ವಿವಿಧ ವಿಷಯಗಳಲ್ಲಿ ಪ್ರವಚನ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.