ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಖತರ್ ರಾಷ್ಟ್ರೀಯ ಸಮಿತಿಗೆ ಪದಾಧಿಕಾರಿಗಳ ಆಯ್ಕೆ
ಮಂಗಳೂರು, ಸೆ.21: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್(ಡಿಕೆಎಸ್ಸಿ) ಮಂಗಳೂರು ಇದರ ಖತರ್ ರಾಷ್ಟ್ರೀಯ ಸಮಿತಿಯನ್ನು ಇತ್ತೀಚೆಗೆ ಪುನಾರಚಿಸಲಾಯಿತು.
ಡಿಕೆಎಸ್ಸಿ ಕೇಂದ್ರ ಸಮಿತಿಯ ಅಧ್ಯಕ್ಷ ಅಸ್ಸೈಯದ್ ಕೆಎಸ್.ಆಟಕ್ಕೋಯ ತಂಙಳ್ ಕುಂಬೋಳ್ ಅಧ್ಯಕ್ಷತೆ ಸಭೆಯ ವಹಿಸಿದ್ದರು. ಮೂಳೂರು ಮರ್ಕಝ್ ತಅಲೀಮಿಲ್ ಇಹ್ಸಾನ್ ನ ಜನರಲ್ ಮ್ಯಾನೇಜರ್ ಮೌಲಾನ ಯು.ಕೆ.ಮುಸ್ತಫಾ ಸಅದಿ ಉದ್ಘಾಟಿಸಿದರು.
ಅಲ್ ಇಹ್ಸಾನ್ ವುಮೆನ್ಸ್ ಶರೀಅತ್ ಕಾಲೇಜು ಪ್ರಾಂಶುಪಾಲ ಮುಹಮ್ಮದ್ ಅಲ್ ಖಾಸಿಮಿ ಮುಖ್ಯಭಾಷಣ ಮಾಡಿದರು. ಸಭೆಯಲ್ಲಿ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷರಾದ ಹಾಜಿ ಹಾತಿಂ ಕಂಚಿ, ಮಾಜಿ ಕಾರ್ಯಾಧ್ಯಕ್ಷ ಅಬ್ದುಲ್ ಹಮೀದ್ ಅರೆಮಿಕ್ಸ್ ಹಿತವಚನ ನೀಡಿದರು.
ಡಿಕೆಎಸ್ಸಿ ನಾಯಕರಾದ ಹಾತಿಂ ಕೂಳೂರು, ಹಾಜಿ ಸುಲೈಮಾನ್ ಸೂರಿಂಜೆ, ಅಬ್ದುಲ್ ಅಝೀಝ್ ಆತೂರು, ಇಬ್ರಾಹೀಂ ಕನ್ನಂಗಾರ್, ಅಬೂಬಕರ್ ಬರ್ವ, ಯೂಸುಫ್ ಆರ್ಲಪದವು ಯುಎಇ, ಮೋನಬ್ಬ ಅಬ್ದುಲ್ ರಹಿಮಾನ್ ಒಮಾನ್, ಅಬ್ಬಾಸ್ ಉಚ್ಚಿಲ ಒಮಾನ್ ಮತ್ತು ಸೀದಿ ಹಾಜಿ ಬಹರೈನ್ ಮಾತನಾಡಿದರು.
ಈ ಸಂದರ್ಭ ಖತರ್ ರಾಷ್ಟ್ರೀಯ ಸಮಿತಿಯನ್ನು ಪುನಾರಚಿಸಲಾಯಿತು. ಅಧ್ಯಕ್ಷರಾಗಿ ಸುಲೈಮಾನ್ ಮುಂಡ್ಕೂರ್, ಪ್ರಧಾನ ಕಾರ್ಯದರ್ಶಿಯಾಗಿ ಇಸ್ಹಾಕ್ ನಿಝಾಮಿ, ಕೋಶಾಧಿಕಾರಿಯಾಗಿ ಅಯ್ಯೂಬ್ ಹೊನ್ನಾವರ, ಉಪಾಧ್ಯಕ್ಷರುಗಳಾಗಿ ಅಸ್ಗರ್ ಮೂಳೂರು, ಶಂಸುದ್ದೀನ್ ಕಾಟಿಪಳ್ಳ, ಜೊತೆ ಕಾರ್ಯದರ್ಶಿಗಳಾಗಿ ಸೈಯದ್ ಅಬ್ದುಲ್ ರಝಾಕ್ ಮುಂಡ್ಕೂರು ಹಾಗೂ ನಿಹಾಲ್ ಇಬ್ರಾಹೀಂ ಕಾಪು, ಸಂಚಾಲಕರಾಗಿ ಪಿ.ಕೆ.ಮುಹಮ್ಮದ್ ಪೂಂಜಾಲಕಟ್ಟೆ, ಅನ್ವರ್ ಹಳೆಯಂಗಡಿ, ಅನ್ಸಾರ್ ಮಟಪಾಡಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಜಮಾಲುದ್ದೀನ್ ಪಕ್ಷಿಕೆರೆ , ಹೈದರಲಿ ಹಸನ್ ಕುಂಜತ್ತಬೈಲ್, ಅಬ್ದುಲ್ ಹಮೀದ್ ತೋಕೆ, ನಝೀರ್ ವಳಚ್ಚಿಲ್, ಅಬ್ದುಲ್ಲಾ ಮುಹಿಯದ್ದಿ ಉಚ್ಚಿಲ, ಮುಹಮ್ಮದ್ ಅಶ್ರಫ್ ವಳಚ್ಚಿಳ್, ಫೈಸಲ್ ಬರ್ವ, ಅಬ್ದುಲ್ ರಹಿಮಾನ್ ಶಿರ್ವ, ಸೂಪಿ ಇಬ್ರಾಹೀಂ ನೇಜಾರು, ಯಹ್ಯಾ ಕೊಡಂಗೈ, ಮುಹಮ್ಮದ್ ಶರೀಫ್ ಮಾಡೂರು, ಅಬ್ದುಲ್ ರಹಿಮಾನ್ ಉಪ್ಪಿನಂಗಡಿ, ಇಮ್ತಿಯಾಝ್ ಕಾರ್ನಾಡ್, ತಬ್ಶೀರ್ ಮನ್ಹರ್, ಇಮ್ರಾನ್ ಬಂಟ್ವಾಳ, ಫಾರೂಕ್ ಬೆಳಪು ಮತ್ತು ಹಬೀಬ್ ಹಿಮಮಿ ಆಯ್ಕೆಯಾದರು.
ಇಸ್ಹಾಕ್ ನಿಝಾಮಿ ಸ್ವಾಗತಿಸಿದರು. ದಾವೂದ್ ಕಜೆಮಾರ್ ಹಾಗೂ ಇಸ್ಮಾಯೀಲ್ ಮುಸ್ಲಿಯಾರ್ ದೊಡ್ಡಣಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.