ಉಳ್ಳಾಲ : ಆಯುಷ್ಮಾನ್ ಕಾರ್ಡ್ ಅಭಿಯಾನ
ಉಳ್ಳಾಲ : ರಹ್ಮಾನಿಯ ಮಸೀದಿ ಮತ್ತು ಬುಸ್ತಾನುಲ್ ಉಲೂಮ್ ಯೂತ್ ಅಸೋಸಿಯೇಷನ್ ಪೇಟೆ ಉಳ್ಳಾಲ ಇದರ ಸಹಭಾಗಿತ್ವದಲ್ಲಿ ಪೇಟೆ ಮಸೀದಿಯ ವಠಾರದಲ್ಲಿ ಆಯುಷ್ಮಾನ್ ಕಾರ್ಡ್ ಅಭಿಯಾನ ನಡೆಯಿತು.
ಉದ್ಘಾಟನೆಯನ್ನು ಪೇಟೆ ಮಸೀದಿಯ ಅಧ್ಯಕ್ಷ ಮೋಹಿದ್ದೀನ್ ಹಾಜಿ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಪೇಟೆ ಮಸೀದಿ ಕಾರ್ಯದರ್ಶಿ ಮುಸ್ತಫಾ ಅಹ್ಮದ್, ಬುಸ್ತಾನುಲ್ ಉಲೂಮ್ ಯೂತ್ ಅಸ್ಸೋಸಿಯೇಷನ್ ಅಧ್ಯಕ್ಷ ತೌಸೀಫ್ ಹುಸೈನ್, ಕಾರ್ಯದರ್ಶಿ ಅಝೀಮ್, ಜತೆ ಕಾರ್ಯದರ್ಶಿ ಶರಾಫತ್, ಖಾಜಂಜಿ ಆಫ್ರಿದ್ ಕೊಟ್ಟಾರ, ಸದಸ್ಯ ಝೈದ್ ಸಲೀಮ್, ಸಿನಾನ್ ಕೊಟ್ಟಾರ, ಇರ್ಫಾನ್ ಬಸ್ತಿಪಡ್ಪು, ನೌಫಾಲ್,ಸಹಾಲ್, ಮೆಹ್ರಾಲಿ, ಫಯಾಝ್ ಕೊಟ್ಟಾರ, ಮುಸ್ತಫಾ ಕೊಟ್ಟಾರ, ಇರ್ಷಾದ್ ಪೇಟೆ, ಸರ್ಫ್ರಾಝ್, ರಹ್ಮಾನ್ ಬಸ್ಥಿಪಡ್ಪು ಮತ್ತು ಸಿಸ್ಟಂ ಆಪರೇಟರ್ ಅಶ್ರಫ್ ಉಪಸ್ಥಿತರಿದ್ದರು. ಪೇಟೆ ಮಸೀದಿಯ ಮೊಹಲ್ಲಿಮ್ ಹಾರಿಸ್ ಉಸ್ತಾದ್ ದುವಾ ನೆರೆವರಿಸಿದರು.