ಗಾಂಜಾ ಸೇವನೆ ಆರೋಪ : ನಾಲ್ಕು ಮಂದಿ ವಶಕ್ಕೆ
ಉಡುಪಿ, ಸೆ.22: ಗಾಂಜಾ ಸೇವನೆಗೆ ಸಂಬಂಧಿಸಿ ಜಿಲ್ಲೆಯ ವಿವಿಧೆಡೆ ಹಲವು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಸೆ.19ರಂದು ಉಡುಪಿ ನಗರ ಠಾಣಾ ವ್ಯಾಪ್ತಿಯ 76 ಬಡಗುಬೆಟ್ಟು ಗ್ರಾಮದ ಹನುಮಾನ್ ಗ್ಯಾರೇಜ್ ಬಳಿ ಸ್ಥಳೀಯ ನಿವಾಸಿ ಧನುಷ್ ಕುಂದರ್ (18), ಮತ್ತು ಇಂದಿರಾನಗರ-ಕುಕ್ಕಿಕಟ್ಟೆಯ ಮಸೀದಿ ಬಳಿ ಸ್ಥಳೀಯ ನಿವಾಸಿ ಸ್ಟ್ಯಾನ್ಲಿ ಸಂದೀಪ್(29), ಸೆ.21ರಂದು ಉಡುಪಿ ನಗರದ ಸಿಟಿಬಸ್ ನಿಲ್ದಾಣ ಹಳೆ ಕಟ್ಟಡದ ಬಳಿ ಪ್ರೇಮನಾಥ(19) ಮತ್ತು ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆ ಗ್ರಾಪಂ ಕಚೇರಿ ಸಮೀಪ ಕಲ್ಯಾಣಪುರ ನಿಡಂಬಳ್ಳಿಯ ಸೃಜನ್ ಸುಧಾಕರ ಪಾಲನ್(18) ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ಪರೀಕ್ಷೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
Next Story