ಅಂಗಡಿಗೆ ನುಗ್ಗಿ ನಗದು ಕಳವು
ಉಡುಪಿ, ಸೆ.24: ನಗರದ ಕರಾವಳಿ ಜಂಕ್ಷನ್ ಬಳಿಯ ಕಾರ್ತಿಕ್ ಟ್ರೇಡ್ ಸೆಂಟರ್ ಬಿಲ್ಡಿಂಗ್ನ ಒಂದನೆ ಮಹಡಿಯಲ್ಲಿರುವ ಅಟೋಮೊಬೈಲ್ ಅಂಗಡಿಗೆ ಸೆ.23ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಬನ್ನಂಜೆಯ ಸಂತೋಷ್ ಕುಮಾರ್ ಎಂಬವರ ಕ್ಲಾಸಿಕ್ ಅಟೋಮೊಬೈಲ್ ಅಂಗಡಿಯ ಬೀಗ ಮುರಿದು ಒಳನುಗ್ಗಿದ ಕಳ್ಳರು, ಕ್ಯಾಶ್ ಡ್ರಾವರ್ನಲ್ಲಿದ್ದ 1,50,000 ರೂ.ವನ್ನು ಕಳವು ಮಾಡಿದ್ದಾರೆಂದು ದೂರಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story