ರೈತ, ಕಾರ್ಮಿಕರ ಕರ್ನಾಟಕ ಬಂದ್ ಗೆ ಡಿವೈಎಫ್ಐ ಬೆಂಬಲ
ಬಂಟ್ವಾಳ : ರೈತ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಬಲವಂತವಾಗಿ ಜಾರಿಗೆ ತರುತ್ತಿರುವ ಬಿಜೆಪಿ ಸರಕಾರದ ನೀತಿಗಳನ್ನು ಪ್ರತಿಭಟಿಸಿ ರೈತ, ಕಾರ್ಮಿಕ ಸಂಘಟನೆಗಳು ಸೆ. 28 ರಂದು ಭಾರತ್ ಬಂದ್ ಗೆ ಕರೆ ನೀಡಿವೆ. ರಾಜ್ಯದಲ್ಲಿ ಅಂದು ಬಂದ್ ನಡೆಸುವ ಮೂಲಕ ರಾಷ್ಟ್ರ ಮಟ್ಟದ ಹೋರಾಟದಲ್ಲಿ ಭಾಗಿಯಾಗಲು ರೈತ ಸಂಘಟನೆಗಳ ಜಂಟಿ ವೇದಿಕೆ ನಿರ್ಧರಿಸಿದೆ. ರೈತ, ಕಾರ್ಮಿಕರ ಹೋರಾಟವನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಬಂಟ್ವಾಳ ತಾಲೂಕು ಸಮಿತಿಯು ಪೂರ್ಣವಾಗಿ ಬೆಂಬಲಿಸುತ್ತಿದ್ದು, ಅಂದು ನಡೆಯುವ ಬಂದ್ ಹಾಗೂ ಪ್ರತಿಭಟನೆಗಳಲ್ಲಿ ಡಿವೈಎಫ್ಐ ಕಾರ್ಯಕರ್ತರು ಭಾಗಿಯಾಗುತ್ತಾರೆ ಎಂದು ಡಿವೈಎಫ್ಐ ಪ್ರಕಟನೆಯಲ್ಲಿ ತಿಳಿಸಿದೆ.
Next Story