ಸೆ.28: ಬೈಂದೂರಿನಲ್ಲಿ ಕಾರ್ಮಿಕರ ಪ್ರತಿಭಟನೆ
ಉಡುಪಿ, ಸೆ.27: ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಕರ್ನಾಟಕ ರಾಜ್ಯ ಕರೆಯಂತೆ ಸೆ.28ರ ಕರ್ನಾಟಕ ರಾಜ್ಯ ಬಂದ್ ಯಶಸ್ವಿ ಗೊಳಿಸಲು ರೈತ, ಕೃಷಿಕೂಲಿಕಾರರ, ಕಾರ್ಮಿಕ, ಸಂಘಟನೆಗಳಾದ ಎಐಕೆಎಸ್, ಎಐಎಡಬ್ಲ್ಯುಯು, ಸಿಐಟಿಯು ಸಕ್ರೀಯವಾಗಿ ಭಾಗವಹಿಸಲಿವೆ.
ಈ ಪ್ರಯುಕ್ತ ಬೆಳಗ್ಗೆ 10.30ಕ್ಕೆ ಬೈಂದೂರು ಸಿಐಟಿಯು ಕಚೇರಿಯಲ್ಲಿ ಕಾರ್ಮಿಕರು ಸಭೆ ಸೇರಿ, ಬಳಿಕ ರಾಷ್ಟ್ರೀಯ ಹೆದ್ದಾರಿ(ಬೈಂದೂರು ಜಂಕ್ಷನ್) ಅಂಡರ್ ಪಾಸ್ ಬಳಿ ಪ್ರತಿಭಟನೆ ನಡೆಸಲಾಗುವುದು ಎಂದು ವೆಂಕಟೇಶ್ ಕೋಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story