ಸೆ.30: ಮಂಗಳೂರಿನ ವಿವಿಧೆಡೆ ವಿದ್ಯುತ್ ನಿಲುಗಡೆ
ಮಂಗಳೂರು, ಸೆ.29: ಕೂಳೂರು, ಚಿಲಿಂಬಿ, ಕುಂಜತ್ತಬೈಲ್, ಮರಕಡ, ದೇರೆಬೈಲ್ ಮತ್ತು ಮುಲ್ಲಕಾಡು ಫೀಡರ್ಗಳಲ್ಲಿ ಸೆ.30ರಂದು ಬೆಳಗ್ಗೆ 9:30ರಿಂದ ಸಂಜೆ 4ರವರೆಗೆ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದ್ದು, ನಗರದ ವಿವಿಧೆಡೆ ವಿದ್ಯುತ್ ನಿಲುಗಡೆಯಾಗಲಿದೆ.
ಮಂಗಳೂರಿನ ಗಾಂಧಿನಗರ, ಶಾಂತಿನಗರ, ವಿದ್ಯಾನಗರ, ಕೂಳೂರು ಜಂಕ್ಷನ್, ರಾಯಿಕಟ್ಟೆ, ಬಂಗ್ರಕೂಳೂರು, ಕೊಟ್ಟಾರಚೌಕಿ, ಮೇಲು ಕೊಪ್ಪಳ, ಜ್ಯೋತಿನಗರ, ಕುಂಜತ್ತಬೈಲ್, ಕೊರಂಟಾಡಿ, ಮರಕಡ, ಕಾವೂರುಕಟ್ಟೆ, ಪಳನೀರು, ಶಿವನಗರ, ಮುಲ್ಲಕಾಡು, 4ನೇ ಮೈಲು, ಆಕಾಶಭವನ, ದೇರೆಬೈಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.
Next Story