ಜೂ.25: ಎಂಸಿಸಿ ಬ್ಯಾಂಕ್ ಕಾರ್ಕಳ ಶಾಖೆಯ ಸ್ಥಳಾಂತರ
ಮಂಗಳೂರು, ಜೂ.22: ಎಂಸಿಸಿ ಬ್ಯಾಂಕ್ನ ಕಾರ್ಕಳ ಶಾಖೆಯು ಜೂ.25ರ ಬೆಳಗ್ಗೆ 10:30ಕ್ಕೆ ಕಾರ್ಕಳ ತಾಲೂಕು ಕಚೇರಿ ರಸ್ತೆಯಲ್ಲಿರುವ ಮಹಾಮ್ಮಾಯಿ ಕಾಂಪ್ಲೆಕ್ಸ್ಗೆ ಸ್ಥಳಾಂತರಗೊಳ್ಳಲಿದೆ. ಕಾರ್ಕಳ ಕ್ರೈಸ್ಟ್ ಕಿಂಗ್ ಚರ್ಚ್ನ ಧರ್ಮಗುರು ವಂ. ಜೋಸ್ವಿ ಫೆರ್ನಾಂಡಿಸ್ ಆಶೀರ್ವಚಿಸಲಿಸಲಿದ್ದು, ಶಾಸಕ ಸುನೀಲ್ ಕುಮಾರ್ ಸ್ಥಳಾಂತರದ ಶಾಖೆ ಉದ್ಘಾಟಿಸುವರು. ಮಾಜಿ ಶಾಸಕ ಎಚ್. ಗೋಪಾಲ್ ಭಂಡಾರಿ ಭದ್ರತಾ ಕೊಠಡಿಯನ್ನು ಉದ್ಘಾಟಿಸಲಿದ್ದು, ಚಿನ್ನಾಭರಣ ಸಾಲದ ವಿಭಾಗವನ್ನು ಉದ್ಯಮಿ ಕೆ.ಎಸ್. ಇಮ್ತಿಯಾಝ್ ಉದ್ಘಾಟಿಸುವರು ಎಂದು ಪ್ರಕಟನೆ ತಿಳಿಸಿದೆ.
Next Story