ತಾಯಿ ಬೈದರೆಂದು ನೊಂದು ನೇಣಿಗೆ ಶರಣಾದ ವಿದ್ಯಾರ್ಥಿನಿ
ಕಾಸರಗೋಡು, ಜು.11: ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿದ್ಯಾನಗರ ಠಾಣಾ ವ್ಯಾಪ್ತಿಯ ಪೊಯಿನಾಚಿಯಲ್ಲಿ ನಡೆದಿದೆ.
ಕಾಞಂಗಾಡ್ ಕೇಂದ್ರೀಯ ವಿದ್ಯಾಲಯದ ಪ್ಲಸ್ ಟು ವಿದ್ಯಾರ್ಥಿನಿ, ಪೊಯಿನಾಚಿ ಮೋಟೆಯ ಆದಿತ್ಯಾ (16) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ.
ತಾಯಿ ಬೈದರು ಎಂಬ ಕಾರಣಕ್ಕೆ ರವಿವಾರ ರಾತ್ರಿ ವೇಳೆ ಮನೆಯ ಕೊಠಡಿಗೆ ತೆರಳಿ ಈಕೆ ಬಾಗಿಲು ಹಾಕಿಕೊಂಡಿದ್ದಳು. ತುಂಬಾ ಹೊತ್ತಾದರೂ ಹೊರಬಾರದೆ ಇದ್ದುದರಿಂದ ಗಾಬರಿಗೊಂಡ ಮನೆಯವರು ಬಾಗಿಲು ಮುರಿದು ಒಳನೋಡಿದಾಗ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕೂಡಲೇ ಈಕೆಯನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಜೀವ ಉಳಿಸಲಾಗಲಿಲ್ಲ.
ವಿದ್ಯಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story