ಪೇಜಾವರ ಸ್ವಾಮೀಜಿಯ ಮಾಜಿ ಕಾರು ಚಾಲಕನಿಗೆ ಜೀವ ಬೆದರಿಕೆ
ಉಡುಪಿ, ಜ.21: ಪೇಜಾವರ ಸ್ವಾಮೀಜಿಯ ಮಾಜಿ ಕಾರು ಚಾಲಕ ಹಾಗೂ ಪೇಜಾವರ ಪರ್ಯಾಯ ಸೌಹಾರ್ದ ಮುಸ್ಲಿಮ್ ಸಮಿತಿಯ ಪದಾಧಿಕಾರಿಯಾಗಿರುವ ಮುಹಮ್ಮದ್ ಆರಿಫ್ ದೊಡ್ಡನಗುಡ್ಡೆ ಎಂಬವರಿಗೆ ಇಂದು ಮಧ್ಯಾಹ್ನ ದುಬೈಯಿಂದ ಬೆದರಿಕೆ ಕರೆ ಬಂದಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲವು ವರ್ಷಗಳ ಕಾಲ ಪೇಜಾವರ ಸ್ವಾಮೀಜಿಯ ಕಾರು ಚಾಲಕರಾಗಿ ದುಡಿದಿದ್ದ ಇವರು ಪೇಜಾವರ ಸ್ವಾಮೀಜಿ ಬ್ಲಡ್ ಡೊನೇಶನ್ ಟೀಮ್ನ್ನು ಕಟ್ಟಿಕೊಂಡಿದ್ದರು. ಇತ್ತೀಚೆಗೆ ನಡೆದ ಪೇಜಾವರ ಸ್ವಾಮೀಜಿಯ 5ನೆ ಪರ್ಯಾಯ ಮಹೋತ್ಸವದ ಸಂದರ್ಭದಲ್ಲಿ ಸೌಹಾರ್ದ ಮುಸ್ಲಿಮ್ ಸಮಿತಿಯ ಮೂಲಕ ರಕ್ತದಾನ ಹಾಗೂ ಹೊರೆಕಾಣಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಅಪರಿಚಿತರೊಬ್ಬರು ಇಂಟರ್ನೆಟ್ ಕರೆಯ ಮೂಲಕ ಜೀವ ಬೆದರಿಕೆ ಹಾಕಿದ್ದಾರೆಂದು ಆರಿಫ್ ದೂರಿನಲ್ಲಿ ತಿಳಿಸಿದ್ದಾರೆ.
Next Story