ಕುಂಜತ್ತೂರು; ಉದ್ಯಾವರ ಮಖಾಂ ಉರೂಸ್
ಉದ್ಯಾವರ ಉರೂಸ್: ಮತ ಪ್ರವಚನ
ಕುಂಜತ್ತೂರು, ಜ.22: ಉದ್ಯಾವರ ಮಖಾಂ ಉರೂಸ್ ಪ್ರಯುಕ್ತ ಗುರುವಾರ ರಾತ್ರಿ ಮತ ಪ್ರವಚನ ನಡೆಯಿತು. ಅಸ್ಸೈಯದ್ ಅಬ್ದುರ್ರಹ್ಮಾನ್ ಇಂಬಿಚ್ಚಿ ಕೋಯ ತಂಙಳ್ ಪ್ರಾರ್ಥನೆಗೆ ನೇತೃತ್ವ ನೀಡಿದರು.
ಉರೂಸ್ ಸಮಿತಿ ಅಧ್ಯಕ್ಷ ಅತಾವುಲ್ಲ ತಂಙಳ್ ಅಧ್ಯಕ್ಷತೆ ವಹಿಸಿದ್ದರು. ಕೆ.ಪಿ. ಹುಸೈನ್ ಸಅದಿ ಕೆ.ಸಿ. ರೋಡ್ ಮುಖ್ಯ ಪ್ರಭಾಷಣ ನಡೆಸಿದರು. ವೇದಿಕೆಯಲ್ಲಿ ಅಬ್ದುಲ್ ವಹಾಬ್ ತಂಙಳ್, ಆಹ್ಮದ್ ಬಾವ, ಸಲೀಂ ರಫಾ,ಹನೀಫ್ ಪಿ.ಎ,ಇಸ್ಮಾಯೀಲ್ ಫೈಝಿ ಪಾತೂರು, ಇಬ್ರಾಹೀಂ ಉಮರ್ ಹಾಜಿ ಮತ್ತಿತರರು ಉಪಸ್ಥಿತರಿದ್ದರು.
Next Story