ಪಚ್ಚನಾಡಿ: ಬಾವಿಗೆ ಹಾರಿ ಹೂವಿನ ವ್ಯಾಪಾರಿ ಆತ್ಮಹತ್ಯೆ
ಮಂಗಳೂರು, ಆ.17: ಬಾವಿಗೆ ಹಾರಿ ಹೂವಿನ ವ್ಯಾಪಾರಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಹೊರವಲಯದ ಪಚ್ಚನಾಡಿ ಬಳಿ ಸಂಭವಿಸಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಕಾರ್ಸ್ಟ್ರೀಟ್ನಲ್ಲಿ ಹೂವಿನ ವ್ಯಾಪಾರ ನಡೆಸುತ್ತಿದ್ದ ಜಯರಾಜ್ ಎಂದು ಗುರುತಿಸಲಾಗಿದೆ.
ಪಚ್ಚನಾಡಿಯಲ್ಲಿರುವ ತಮ್ಮ ಮನೆಯ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story