ಕೊಂಕಣಿ ಮಾನ್ಯತಾ ದಿವಸ್ ಆಚರಣೆ
ಉಡುಪಿ, ಆ.30: ಕೊಂಕಣಿ ಭಾಷಾ ಮಂಡಲ ಉಡುಪಿ ಶಾಖೆಯ ವತಿಯಿಂದ ಕೊಂಕಣಿ ಮಾನ್ಯತಾ ದಿವಸ್ ಕಾರ್ಯಕ್ರಮವನ್ನು ಇತ್ತೀಚೆಗೆ ಉಡುಪಿಯ ಶೋಕ ಮಾತ ಇಗರ್ಜಿಯ ಡಾನ್ಬಾಸ್ಕೋ ಹಾಲ್ನಲ್ಲಿ ಆಯೋಜಿಸಲಾಗಿತ್ತು. ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ.ಜೆರಾಲ್ಡ್ ಪಿಂಟೊ. ಕೊಂಕಣಿ ಭಾಷೆಯ ಇತಿಹಾಸ ಮತ್ತು ಪ್ರಗತಿ ಕುರಿತು ಮಾತನಾಡಿದರು. ರೆ.ಫಾ.ರಾಯ್ಸನ್ ಫೆರ್ನಾಂಡಿಸ್, ವೇದಮೂರ್ತಿ ಚೇಂಪಿ ರಾಮಚಂದ್ರ ಭಟ್ ಮಾತನಾಡಿದರು. ಉಪಾಧ್ಯಕ್ಷ ದಿನೇಶ್ ನಾಯಕ್, ಕಾರ್ಯದರ್ಶಿ ಆನಂದ ಪೈ ಉಪಸ್ಥಿತರಿದ್ದರು. ಯು.ಕಲ್ಯಾಣಿ ಪೈ ಸ್ವಾಗತಿಸಿದರು. ಕೋಶಾಧಿಕಾರಿ ಲೆಸ್ಲೀ ಕರ್ನೆಲಿಯೊ ವಂದಿಸಿದರು. ಶೈಲಾ ಫೆರ್ನಾಂಡಿಸ್ ಕಾರ್ಯಕ್ರಮ ಸಂಯೋಜಿಸಿದ್ದರು.
Next Story