ಉಡುಪಿ: ನಾಳೆ ಪ್ರತಿಭಟನಾ ಮೆರವಣಿಗೆ
ಉಡುಪಿ, ಆ.31: ಕಾರ್ಮಿಕ ಸಂಘಟನೆಗಳು ಮತ್ತು ನೌಕರರ ಸಂಘಟನೆಗಳು ನೀಡಿರುವ ಸೆ.2ರ ಮುಷ್ಕರ ಕರೆಯ ಅಂಗವಾಗಿ ಉಡುಪಿಯಲ್ಲಿ ಅಂದು ಕಾರ್ಮಿಕರ ಬೃಹತ್ ಮೆರವಣಿಗೆ ನಡೆಯಲಿದೆ. ಬೆಳಗ್ಗೆ 10:30ಕ್ಕೆ ಅಜ್ಜರಕಾಡಿನ ಎಲ್ಲೈಸಿ ಕಚೇರಿ ಮುಂಭಾಗದಿಂದ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಾರ್ಪೊರೇಶನ್ ಬ್ಯಾಂಕ್ನ ಸ್ಥಾಪಕರ ಕಚೇರಿ ಎದುರು ಸಮಾ ರೋಪಗೊಳ್ಳುವುದು ಎಂದು ಉಡುಪಿ ಜಿಲ್ಲಾ ಕಾರ್ಮಿಕ ಸಂಘ ಟನೆಗಳ ಜಂಟಿ ಸಮಿತಿಯ ಸಂಚಾಲಕ ಅದಮಾರು ಶ್ರೀಪತಿ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ.2ರ ಮುಷ್ಕರಕ್ಕೆ ರಾಜ್ಯ ಔಷಧ ಮಾರಾಟ ಪ್ರತಿ ನಿಧಿಗಳ ಸಂಘದ ಉಡುಪಿ ಜಿಲ್ಲಾ ಘಟಕ, ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ ಬೆಂಬಲ ಘೋಷಿಸಿದೆ.
Next Story