ರಾಜ್ಯ ಹೆದ್ದಾರಿಯಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತಿದೆ ವಿದ್ಯುತ್ ಕಂಬ!
ಕಡಬ, ಸೆ.3: ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೈಕಂಬ ಎಂಬಲ್ಲಿ ವಿದ್ಯುತ್ ಕಂಬವೊಂದು ರಸ್ತೆಗೆ ತಾಗಿಕೊಂಡಿದ್ದು, ದುರಂತವನ್ನು ಆಹ್ವಾನ ನೀಡುವಂತಿದೆ.
ಇಲ್ಲೇ ಪಕ್ಕದಲ್ಲಿ ನಿಲ್ದಾಣವೊಂದಿದ್ದು, ಶಾಲಾ ಮಕ್ಕಳು ಸೇರಿದಂತೆ ನೂರಾರು ಜನರು ಬಸ್ಸಿಗಾಗಿ ಕಾಯುತ್ತಿರುತ್ತಾರೆ. ದಿನಂಪ್ರತೀ ಸಾವಿರಾರು ಜನರು ಸುಬ್ರಹ್ಮಣ್ಯಕ್ಕೆ ಇದೇ ರಸ್ತೆಯಿಂದಾಗಿ ಸಾಗುತ್ತಿದ್ದು, ರಾತ್ರಿ ಸಮಯದಲ್ಲಿ ಈ ವಿದ್ಯುತ್ ಕಂಬವು ಗೋಚರಿಸದೇ ಏನಾದರೂ ಅನಾಹುತವಾಗುವ ಮೊದಲು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ
Next Story