ಕರಾಮುವಿವಿ ಪರೀಕ್ಷೆಗಳು ಮುಂದೂಡಿಕೆ
ಉಡುಪಿ, ಸೆ.13: ಮಂಗಳವಾರ(ಸೆ.14) ನಡೆಯಬೇಕಾಗಿದ್ದ ಕರ್ನಾಟಕ ರಾಜ್ಯ ಮುಕ್ತ ವಿವಿಯ ಬಿಎ/ಬಿಕಾಂ ಹಾಗೂ ಎಂಎ/ಎಂಕಾಂನ ಎಲ್ಲ ಪರೀಕ್ಷೆಗಳನ್ನು ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ.
ಮುಂದೂಡಲಾದ ಪರೀಕ್ಷೆಗಳ ವೇಳಾಪಟ್ಟಿಯನ್ನು ತಿಳಿಸಲಾಗುವುದು. ಮಾಹಿತಿಗೆ ಉಡುಪಿ ಕರಾಮುವಿಯ ಬನ್ನಂಜೆಯಲ್ಲಿರುವ ಪ್ರಾದೇಶಿಕ ಕೇಂದ್ರಕ್ಕೆ ಭೇಟಿ ನೀಡಬಹುದು. ಅಥವಾ ವಿವಿಯ ವೆಬ್ಸೈಟ್ www.ksoumysore.edu.in, ದೂ.ಸಂ.: 0820-2522247ನ್ನು ಸಂಪರ್ಕಿಸ ಬಹುದು ಎಂದು ಪ್ರಕಟನೆ ತಿಳಿಸಿದೆ.
Next Story