ಡಾ.ಸದಾನಂದ ಪೆರ್ಲರಿಗೆ ಅರಸು ಮತ್ತು ಎಸ್. ಬಂಗಾರಪ್ಪ ಸಾಂಸ್ಕೃತಿಕ ವೇದಿಕೆ ಪ್ರಶಸ್ತಿ
ಮಂಗಳೂರು, ಸೆ. 20: ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಡಾ.ಸದಾನಂದ ಪೆರ್ಲರಿಗೆ ಕರ್ನಾಟಕ ರಾಜ್ಯ ಡಿ.ದೇವರಾಜ ಅರಸು ಮತ್ತು ಎಸ್. ಬಂಗಾರಪ್ಪ ಸಾಂಸ್ಕೃತಿಕ ವೇದಿಕೆ ‘ಅರಸು ಗೌರವ’ ಪ್ರಶಸ್ತಿ ನೀಡಿ ಸನ್ಮಾನಿಸಿದೆ.
ಪ್ರಶಸ್ತಿ ಪ್ರದಾನ ಹಾಗೂ ಚಿ.ಸ.ನಿಂಗಣ್ಣ ಬರೆದ ಸಾಮಾಜಿಕ ಪರಿವರ್ತನೆಯ ಹರಿಕಾರ ಡಿ.ದೇವರಾಜ ಅರಸು ಕೃತಿ ಲೋಕಾರ್ಪಣೆ ಇತ್ತೀಚೆಗೆ ಕಲಬುರ್ಗಿಯ ಜಿಲ್ಲಾ ರಂಗ ಮಂದಿರದಲ್ಲಿ ಜರಗಿತ್ತು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಲಬುರ್ಗಿಯ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಮತ್ತು ಲೋಕಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಉಪಸ್ಥಿತರಿದ್ದರು.
Next Story