ನರೇಂದ್ರ ಮೋದಿ ದೇಶದಲ್ಲಿನ ಬೆಲೆಯೇರಿಕೆ ಕುರಿತು ಪತಿಕ್ರಿಯೆ ನೀಡಿಲ್ಲ: ಸುಧಾಕರ ರೆಡ್ಡಿ
ಕಾಸರಗೋಡು : ವಿಶ್ವದ ಎಲ್ಲಾ ವಿಚಾರಗಳ ಬಗ್ಗೆ ಟ್ವಿಟ್ ಮಾಡುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದಲ್ಲಿನ ಬೆಲೆಯೇರಿಕೆ ಕುರಿತು ಮಾತ್ರ ಇದುವರೆಗೂ ಟ್ವಿಟ್ ಮಾಡಿಲ್ಲ ಎಂದು ಸಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್ . ಸುಧಾಕರ ರೆಡ್ಡಿ ಅಭಿಪ್ರಾಯಪಟ್ಟರು.
ಅವರು ಬುಧವಾರ ಸಂಜೆ ಮಂಜೇಶ್ವರದ ಹೊಸಂಗಡಿ ಯಲ್ಲಿ ಸಿಪಿಎಂ ಕೇರಳ ರಾಜ್ಯ ಕಾರ್ಯದರ್ಶಿ ಕಾನಂ ರಾಜೇಂದ್ರನ್ ರಿಗೆ ಪಕ್ಷದ ದ್ವಜ ಹಸ್ತಾಂತರಿಸುವ ಮೂಲಕ ರಾಜ್ಯ ಮಟ್ಟದ ಜನಪರ ಯಾತ್ರೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಬೆಲೆಯೇರಿಕೆ ಯಿಂದ ಜನತೆ ದಿನದೂಡ ದಂತಾಗಿದೆ. ಚುನಾವಣೆ ಸಂದರ್ಭದಲ್ಲಿ ನೀಡಿದ ಯಾವುದೇ ಭರವಸೆ ಯನ್ನು ಬಿಜೆಪಿ ಸರಕಾರ ಈಡೇರಿಸಿಲ್ಲ. ವಿದೇಶದಲ್ಲಿರುವ ಕಪ್ಪು ಹಣ ತಂದು ಪ್ರತಿಯೊಬ್ಬರಿಗೆ ತಲಾ ಹದಿನೈದು ಲಕ್ಷ ರೂ . ನೀಡುವುದಾಗಿ ಭರವಸೆ ನೀಡಿದ ಮೋದಿ ಒಂದು ನಯಾ ಪೈಸೆ ಯನ್ನು ತರಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ಮಾಜಿ ಸಚಿವ ಬಿನೋಯ್ ವಿಶ್ವಂ , ಕೆ. ಪಿ ರಾಜೇಂದ್ರನ್ ,
ಪಣ್ಯನ್ ರವೀಂದ್ರನ್ , ಶಾಸಕ ಇ. ಚಂದ್ರಶೇಖರನ್ , ಗೋವಿಂದನ್ ಪಲ್ಲಿಕಾಪಿಲ್ ಮೊದಲಾದವರು ಉಪಸ್ಥಿತರಿದ್ದರು .
ಯಾತ್ರೆ ಫೆಬ್ರವರಿ ಹತ್ತರಂದು ತಿರುವನಂತಪುರದಲ್ಲಿ ಕೊನೆಗೊಳ್ಳಲಿದೆ