ಕಟಪಾಡಿ: ಅ.2ಕ್ಕೆ ಜನಜಾಗೃತಿ ಸಮಾವೇಶ
ಉಡುಪಿ, ಸೆ.26: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಅ.2ರ ರವಿವಾರ ಗಾಂಧಿ ಜಯಂತಿ ಪ್ರಯುಕ್ತ ಜನಜಾಗೃತಿ ಸಮಾವೇಶ ಹಾಗೂ ಜನಜಾಗೃತಿ ವೇದಿಕೆಯ ಪದಗ್ರಹಣ ಸಮಾರಂಭ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ನಾರಾಯಣಗುರು ಸಭಾಭವನದಲ್ಲಿ ನಡೆಯಲಿದೆ.
ಬೆಳಗ್ಗೆ 9ಕ್ಕೆ ಜನಜಾಗೃತಿ ಮೂಡಿಸುವ ಬಗ್ಗೆ ಜಾಥಾ ನಡೆಯಲಿದ್ದು ಕಟಪಾಡಿ ಎಸ್. ವಿ.ಎಸ್. ಶಾಲೆಯ ಪಳ್ಳಿಗುಡ್ಡೆ ಮೈದಾನದಿಂದ ಶ್ರೀ ವಿಶ್ವನಾಥ ಕ್ಷೇತ್ರದ ನಾರಾಯಣಗುರು ಸಭಾಭವನದವರೆಗೆ ಜಾಥಾ ನಡೆಯಲಿದೆ. ಬಳಿಕ ನಡೆಯುವ ಸಮಾವೇಶವನ್ನು ಕಾಪು ಶಾಸಕ ಹಾಗೂ ಮಾಜಿ ಸಚಿವ ವಿನಯಕುಮಾರ್ ಸೊರಕೆ ಉದ್ಘಾಟಿಸಲಿದ್ದಾರೆ ಎಂದು ಯೋಜನೆಯ ಪ್ರಕಟನೆ ತಿಳಿಸಿದೆ.
Next Story