ಕಟೀಲು ದೇವಳಕ್ಕೆ ಪಾಂಡಿಚೇರಿ ಮುಖ್ಯಮಂತ್ರಿ ನಾರಾಯಣ ಸ್ವಾಮಿ ಭೇಟಿ
ಕಟೀಲು,ಅ.16 ಪಾಂಡಿಚೇರಿ ಮುಖ್ಯ ಮಂತ್ರಿ ನಾರಾಯಣ ಸ್ವಾಮಿ ಹಾಗೂ ಪಾಂಡಿಚೇರಿಯ ಶಾಸಕ ಸುಬ್ರಮಣಿ ರವಿವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದ. ಕ., ಉಡುಪಿಯ ದೇವಳಗಳಿಗೆ ಪ್ರತಿವರ್ಷ ಭೇಟಿ ನೀಡಿ ದೇವರ ಆರ್ಶೀವಾದ ಪಡೆಯುತ್ತೇನೆ. ಈ ಬಾರಿಯೂ ಕರಾವಳಿಯ ವಿವಿಧ ದೇವಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದೇನೆ. ನನ್ನ ಮನೋಕಾಮನೆಯನ್ನು ಕಟೀಲು ದುರ್ಗೆ ಈಡೇರಿಸಿದ್ದಾಳೆ. ಈ ಬಾರೀ ಮುಖ್ಯ ಮಂತ್ರಿ ಆಗಿ ಮೊದಲ ಬಾರಿ ಭೇಟಿ ನೀಡುತ್ತಿದ್ದೇನೆ ಎಂದರು.
ಈ ಸಂದರ್ಭ ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕ ವೆಂಕಟರಮಣ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ದೇವಳದ ಪ್ರಬಂಧಕ ವಿಜಯಕುಮಾರ್ ಶೆಟ್ಟಿ ಮುಖ್ಯಮಂತ್ರಿ ಹಾಗೂ ಶಾಸಕರನ್ನು ಸ್ವಾಗತಿಸಿದರು. ರಾಜ್ಯ ಕೆಪಿಸಿಸಿ ಯ ಎಂ.ಸಿ. ಕುಮಾರ್ ಉಪಸ್ಥಿತರಿದ್ದರು.
Next Story