ನ.18ರಂದು ಭೂಮಿಗಾಗಿ ಜೈಲ್ಭರೋ: ಯಾದವ ಶೆಟ್ಟಿ
ವಿಟ್ಲ, ಅ.26: ಬಹುರಾಷ್ಟ್ರೀಯ ಕಂಪೆನಿಗಳಿಗೆ, ಬಂಡವಾಳಶಾಹಿಗಳಿಗೆ ಸರಕಾರವು ಕಾರಿಡಾರ್ ಹೆಸರಿನಲ್ಲಿ ಲಕ್ಷಾಂತರ ಎಕರೆ ಜಮೀನುಗಳನ್ನು ನೀಡುವ ಕ್ರಮವನ್ನು ವಿರೋಧಿಸಿ ಕಾರ್ಮಿಕರು ಹಾಗೂ ಭೂರಹಿತರು ನವೆಂಬರ್ 18ರಂದು ಭೂಮಿಗಾಗಿ ರಾಜ್ಯಾದ್ಯಂತ ಜೈಲ್ ಭರೋ ಚಳವಳಿ ಹಮ್ಮಿಕೊಳ್ಳಲಿದ್ದಾರೆ ಎಂದು ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ ಹೇಳಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಆಶ್ರಯದಲ್ಲಿ ಮಂಗಳವಾರ ಬಿ.ಸಿ.ರೋಡಿನಲ್ಲಿ ನಡೆದ ಬಂಟ್ವಾಳ ತಾಲೂಕು ಅಕ್ರಮ-ಸಕ್ರಮ ಮನೆ ನಿವೇಶನರಹಿತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಾಮಣ್ಣ ವಿಟ್ಲ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ, ರೈತ ಸಂಘದ ಕಾರ್ಯದರ್ಶಿ ಬಿ.ನಾರಾಯಣ, ಪ್ರಮುಖರಾದ ಜಿನ್ನಪ್ಪಸಾಲ್ಯಾನ್, ಕೃಷ್ಣ ಪ್ರಸಾದ್ ಶಂಭೂರು, ದೇಜಪ್ಪ ಪೂಜಾರಿ ಮೊದಲಾದವರು ಭಾಗವಹಿಸಿದ್ದರು.
Next Story