ಕಳವುಗೈದ ಲಾರಿ ಸಹಿತ ಆರೋಪಿ ಸೆರೆ
ಮಂಗಳೂರು, ನ.2: ಎನ್ಎಂಪಿಟಿ ಯಾರ್ಡ್ನಿಂದ ಲಾರಿ ಕಳವುಗೈದು ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಯನ್ನು ಪಣಂಬೂರು ಠಾಣಾ ಪೊಲೀಸರು ಬುಧವಾರ ಬೆಳಗ್ಗೆ ಬಂಧಿಸಿದ್ದಾರೆ.
ಮೂಡಿಗೆರೆಯ ಇಂದಿರಾನಗರ ನಿವಾಸಿ ಮುಹಮ್ಮದ್ ಅಸೀಫ್ ಯಾನೆ ಆಸೀಫ್ (29) ಬಂಧಿತ ಆರೋಪಿ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಪಣಂಬೂರು ಇನ್ಸ್ಪೆಕ್ಟರ್ ಲೋಕೇಶ್ ನೇತೃತ್ವದ ಪೊಲೀಸ್ ತಂಡ ಬುಧವಾರ ಬೆಳಗ್ಗೆ ಸುಮಾರು 7 ಗಂಟೆಗೆ ಪಣಂಬೂರು ಬಳಿ ಆಸೀಫ್ ಚಲಾಯಿಸಿಕೊಂಡು ಬರುತ್ತಿದ್ದ ವಾಹನ ನಿಲ್ಲಿಸಲು ಸೂಚಿಸಿತು. ಆದರೆ, ಆರೋಪಿ ಆಸೀಫ್ ಲಾರಿಯನ್ನು ಜೋಕಟ್ಟೆ ಕಡೆಗೆ ಚಲಾಯಿಸಿದಾಗ ಪೊಲೀಸರು ಬೆನ್ನಟ್ಟಿ ಹಿಡಿದು ವಿಚಾರಿಸಿದಾಗ ಮೂರು ದಿನದ ಹಿಂದೆ ಎನ್ಎಂಪಿಟಿ ಯಾರ್ಡ್ನಿಂದ ಕಳವುಗೈದ ಲಾರಿ ಎಂದು ತಪ್ಪೊಪ್ಪಿಕೊಂಡ.
ಕೊಲೆ ಮತ್ತು ಕೊಲೆಯತ್ನ ಪ್ರಕರಣದ ಆರೋಪಿ ಆಸೀಫ್ ಈ ಹಿಂದೆಯೂ ತಾನು ಲಾರಿಯನ್ನು ಕಳವುಗೈದು ಅಬ್ಬಾಸ್ ಎಂಬಾತನಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾನೆ.
ಪೊಲೀಸರು ವಶಪಡಿಸಿಕೊಂಡ ಲಾರಿಯ ವೌಲ್ಯ 2.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.