ಎನ್ಡಿಟಿವಿಗೆ ನಿರ್ಬಂಧ : ಜಮಾಅತ್ ಖಂಡನೆ
ಮಂಗಳೂರು, ನ. 5: ದೇಶದ ಪ್ರಸಿದ್ಧ ಹಿಂದಿ ಸುದ್ದಿವಾಹಿನಿ ಎನ್ಡಿಟಿವಿಯ ಪ್ರಸಾರವನ್ನು ಒಂದು ದಿನದ ಮಟ್ಟಿಗೆ ನಿಷೇಧಿಸಲು ಕೇಂದ್ರ ಸಚಿವಾಲಯವು ಹೊರಡಿಸಿರುವ ತೀರ್ಮಾನವನ್ನು ಜಮಾಅತೆ ಇಸ್ಲಾಮೀ ಹಿಂದ್ ಖಂಡಿಸಿದೆ.
ಈ ಕ್ರಮವು ಮಾಧ್ಯಮ ಸ್ವಾತಂತ್ರದ ನೇರ ಉಲ್ಲಂಘನೆಯಾಗಿದೆ. ಇದು ಈ ಹಿಂದೆ ದೇಶದಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿಯ ಕರಾಳ ದಿನಗಳಲ್ಲಿದ್ದ ನಿರಂಕುಶ, ಅನಿಯಂತ್ರಿತ ಹಾಗೂ ದಂಡನಾತ್ಮಕ ಸ್ಥಿತಿಗಳನ್ನು ಮತ್ತೆ ಮತ್ತೆ ನೆನಪಿಸುತ್ತಿದೆ. ಆದ್ದರಿಂದ ಈ ನಿಷೇಧವನ್ನು ಆದಷ್ಟು ಬೇಗ ಹಿಂಪಡೆಯಬೇಕೆಂದು ಜಮಾಅತೆ ಇಸ್ಲಾಮೀ ಹಿಂದ್ ಆಗ್ರಹಿಸುತ್ತದೆ ಎಂದು ರಾಷ್ಟ್ರೀಯ ಕಾರ್ಯದರ್ಶಿ ಮುಹಮ್ಮದ್ ಸಲೀಂ ಇಂಜಿನಿಯರ್ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.
Next Story