ಯೂತ್ ಕಾಂಗ್ರೆಸ್ ವತಿಯಿಂದ ಜಾತ್ಯಾತೀತ ಸೆಕ್ಯೂಲರ್ ಮೀಟ್
ಮಂಜೇಶ್ವರ,ನ.12: ಮಂಜೇಶ್ವರ ಮಂಡಲ ಯೂತ್ ಕಾಂಗ್ರೆಸ್ ನ ವತಿಯಿಂದ ಹೊಸಂಗಡಿ ಗೇಟ್ವೇ ಅಡಿಟೋರಿಯಂನಲ್ಲಿ ಶನಿವಾರ ಜಾತ್ಯಾತೀತ ಸೆಕ್ಯೂಲರ್ ಮೀಟ್ ಹಮ್ಮಿಕೊಳ್ಳಲಾಯಿತು.
ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ನಾಸರ್ ಮೊಗ್ರಾಲ್ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ನೇತಾರ ರಿಝ್ವೆನ್ ಹರ್ಷಾದ್ ಉದ್ಘಾಟಿಸಿದರು.
ಈ ಸಂದರ್ಭ ವೇದಿಕೆಯಲ್ಲಿ ಹಕೀಂ ಕುನ್ನಿಲ್, ಸಾಜಿದ್ ಮುವ್ವಾಲ್, ಹರ್ಷಾದ್ ವರ್ಕಾಡಿ, ಸೋಮಶೇಖರ್, ಮನಾಫ್, ಉಮ್ಮರ್ ಬೋರ್ಕಳ, ಕೇಶವ ಪ್ರಸಾದ್ ನಾಣಿಹಿತ್ಲು ಮೊದಲಾದವರು ಉಪಸ್ತಿತರಿದ್ದರು. ಕಾರ್ಯಕ್ರಮದಲ್ಲಿ ಹಲವಾರು ಮಂದಿ ಪಾಲ್ಗೊಂಡರು.
Next Story