ಮತ್ತೆ ಇಬ್ಬರ ಬಂಧನ
ಎಟಿಎಂ ಹಣ ವಂಚನೆ ಪ್ರಕರಣ
ಕಾಸರಗೋಡು, ನ.19: ಅಮೆರಿಕನ್ ಪ್ರಜೆಗಳ ಎಟಿಎಂ ಮಾಹಿತಿಗಳನ್ನು ಸೋರಿಕೆ ಮಾಡಿ ಕೇರಳ ಹಾಗೂ ಇತರ ಕಡೆಗಳಲ್ಲಿ ಹಣ ವಂಚನೆಗೆ ಸಂಬಂಧಪಟ್ಟಂತೆ ಪ್ರಮುಖ ಸೂತ್ರದಾರರಾದ ಇಬ್ಬರನ್ನು ತನಿಖಾ ತಂಡ ಬಂಧಿಸಿದೆ. ಇದರಿಂದ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಏಳಕ್ಕೇರಿದೆ.
ಬಂಧಿತರನ್ನು ಮುಂಬೈಯ ಸೈಫ್ ಅಲಿ(29) ಮತ್ತು ಉಪ್ಪಳದ ಮಿಷಾದ್(27) ಎಂದು ಗುರುತಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದರು. ಇವರು ನೀಡಿದ ಸುಳಿವಿನಂತೆ ಇತರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಈ ನಡುವೆ ತನಿಖೆಯನ್ನು ಮಂಗಳೂರಿಗೆ ವಿಸ್ತರಿಸಲಾಗಿದೆ. ಕಾಸರಗೋಡು ನಗರ ಠಾಣಾ ಸಬ್ ಇನ್ಸ್ಪೆಕ್ಟರ್ ಪಿ. ರತ್ನಾಕರ ನೇತೃತ್ವದ ಪೊಲೀಸ್ ತಂಡ ಮಂಗಳೂರಿಗೆ ತೆರಳಿ ಮಾಹಿತಿ ಕಲೆ ಹಾಕುತ್ತಿದೆ.
Next Story