ಗೊಂದಲ ಸೃಷ್ಟಿಸಿದ ‘ಅಪಹರಣ’ ವದಂತಿ
ಮಂಜೇಶ್ವರ, ನ.19: ಶಾಲೆಗೆ ಹೊರಟು ರಸ್ತೆ ಬದಿಗೆ ಬಂದು ನಿಂತಿದ್ದ ಬಾಲಕನನ್ನು ಕಾರಿನಲ್ಲಿ ಹತ್ತಿಸಿ ಕರೆದೊಯ್ದಿರುವುದು ಭಾರೀ ಆತಂಕದ ವಾತಾವರಣವನ್ನು ಸೃಷ್ಟಿಸಿತು.
ಸೂರಂಬೈಲಿನ ಶಾಲೆಯೊಂದರ ವಿದ್ಯಾರ್ಥಿಯಾದ, ಮಾವಿನಕಟ್ಟೆ ನಿವಾಸಿ ಬಾಲಕ ಶನಿವಾರ ಬೆಳಗ್ಗೆ 8:30ಕ್ಕೆ ಶಾಲೆಗೆಂದು ಹೊರಟಿದ್ದನು. ಬಾಲಕ ನನ್ನು ರಸ್ತೆ ಬದಿಗೆ ತಲುಪಿಸಿದ ತಾಯಿ ಮರಳುವಷ್ಟರಲ್ಲಿ ಆಗಮಿಸಿದ ಕಾರೊಂದು ಬಾಲಕನನ್ನು ಹತ್ತಿಸಿ ಸಂಚರಿಸಿದೆ. ಇದ ರಿಂದ ಗಲಿಬಿಲಿಗೊಂಡ ಬಾಲಕನ ತಾಯಿ ಪರಿಸರ ನಿವಾಸಿಗಳಿಗೆ ವಿಷಯ ತಿಳಿಸಿದರು. ಇತ್ತೀಚೆಗೆ ಮಕ್ಕಳ ಅಪಹರಣದ ಬಗ್ಗೆ ಆತಂಕಗೊಂಡ ಬಾಲಕನ ಹೆತ್ತವರು ಹಾಗೂ ನಾಗರಿಕರು ವಿವಿಧೆಡೆ ವಿಷಯ ತಿಳಿಸಿದರು. ಈ ಬಗ್ಗೆ ಕುಂಬಳೆ ಪೊಲೀಸರಿಗೂ ದೂರ ನೀಡಲಾಗಿದ್ದು ತಕ್ಷಣ ಜಾಗೃತರಾದ ಪೊಲೀಸರು ವಿವಿಧೆಡೆ ವಾಹನ ತಪಾಸಣೆಗೆ ಮುಂದಾ ದರು. ಆದರೆ ಬಾಲಕ ಪತ್ತೆಯಾಗದ ಹಿನ್ನೆಲೆಯಲ್ಲಿ ಆತ ಕಲಿಯುವ ಶಾಲೆಗೆ ತೆರಳಿ ವಿಚಾರಿಸಿದಾಗ ಬಾಲಕ ತರಗತಿ ಯಲ್ಲಿದ್ದನು ಎಂದು ತಿಳಿದು ಬಂದಿದೆ.
Next Story