ಲಕ್ಷಾಂತರ ರೂ. ವೌಲ್ಯದ ಅಡಿಕೆ ಕಳವು
ಶಂಕರನಾರಾಯಣ, ನ.20: ಹಾಲಾಡಿ ಗ್ರಾಮದ ಜೆಎಂಸಿ ಎಂಬಲ್ಲಿರುವ ಗೋದಾಮಿನಿಂದ ಲಕ್ಷಾಂತರ ರೂ. ವೌಲ್ಯದ ಅಡಿಕೆ ಕಳವು ಮಾಡಿರುವ ಘಟನೆ ವರದಿಯಾಗಿದೆ.
ನ.20ರಂದು ನಸುಕಿನ ವೇಳೆ ಹಾಲಾಡಿಯ ಕುಮಾರದಾಸ್ ಎಂಬವರ ಗೋದಾಮಿನಲಿದ್ದ ಸುಮಾರು 4,50,000ರೂ. ಮೌಲ್ಯದ 20 ಕ್ವಿಂಟಾಲ್ ಅಡಿಕೆ ಮತ್ತು ಸುಮಾರು 17,000ರೂ. ಮೌಲ್ಯದ ಒಂದು ಡಿಜಿಟಲ್ ಸ್ಕೇಲ್ ಅನ್ನು ಕಳವು ಮಾಡಲಾಗಿದೆ. ಈ ಸೊತ್ತುಗಳನ್ನು ಪಿಕಪ್ ವಾಹನದಲ್ಲಿ ಕಳವು ಮಾಡಿಕೊಂಡು ಹೋಗಿರುವ ಸಾಧ್ಯತೆ ಇದೆ ಎಂದು ಸಂಶಯಿಸಲಾಗಿದೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Next Story