14 ಲಕ್ಷ ರೂ. ಮೌಲ್ಯದ ವಜ್ರದ ಉಂಗುರ ಕಳವುಗೈದಿದ್ದ ಆರೋಪಿ ಬಂಧನ
ಮಂಗಳೂರು, ನ.25: ಮನೆಯೊಂದರ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವನನ್ನು ಮಂಗಳೂರಿನ ಕದ್ರಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಚಿಕ್ಕಮಗಳೂರಿನ ಯೂನುಸ್ ಅಹ್ಮದ್ ಯಾನೆ ಲಿಯಾಖತ್ (36) ಎಂದು ಗುರುತಿಸಲಾಗಿದೆ.
ಬಂಧಿತನಿಂದ ಕಳವುಗೈದ 14 ಲಕ್ಷ ಮೌಲ್ಯದ ವಜ್ರದ ಉಂಗುರ ಸಹಿತ 40 ಸಾವಿರ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ನ.22 ರಂದು ಸಿರಾಜ್ ಎಂಬವರ ಮನೆಯಿಂದ ಆರೋಪಿ ವಜ್ರದ ಉಂಗುರವನ್ನು ಕಳವುಗೈದಿದ್ದ. ಈ ಬಗ್ಗೆ ಕದ್ರಿ ಠಾಣೆಯಲ್ಲಿ ಸಿರಾಜ್ ದೂರು ದಾಖಲಿಸಿದ್ದರು. ಕದ್ರಿ ಪೊಲೀಸ್ ಇನ್ಸ್ಪೆೆಕ್ಟರ್ ಮಾರುತಿ ನಾಯಕ್ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
Next Story